alex Certify BIG NEWS: ಆನಂದಯ್ಯ ಆಯುರ್ವೇದ ಔಷಧಿ ಪಡೆದ ವ್ಯಕ್ತಿ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಆನಂದಯ್ಯ ಆಯುರ್ವೇದ ಔಷಧಿ ಪಡೆದ ವ್ಯಕ್ತಿ ಸಾವು

ನೆಲ್ಲೂರು: ಕೊರೊನಾ ಸೋಂಕಿಗೆ ಆಂಧ್ರಪ್ರದೇಶದ ಕೃಷ್ಣಪಟ್ಟಣಂ ನ ಆನಂದಯ್ಯ ನೀಡುತ್ತಿದ್ದ ಆಯುರ್ವೇದ ಔಷಧಿ ಭಾರಿ ಸುದ್ದಿಯಾಗಿತ್ತು. ಈ ಔಷಧಿ ಪಡೆದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕೃಷ್ಣಪಟ್ಟಣಂ ಗ್ರಾಮದ ಆನಂದಯ್ಯ ಕೊರೊನಾ ಸೋಂಕಿಗೆ ಔಷಧಿ ನೀಡುತ್ತಿದ್ದರು. ಔಷಧಿಗಾಗಿ ಜನರು ಮುಗಿಬಿದ್ದು ಖರೀದಿಸಿದ್ದ ಬೆನ್ನಲ್ಲೇ ಆನಂದಯ್ಯ ಔಷಧಿಗೆ ಸರ್ಕಾರ ತಾತ್ಕಾಲಿಕ ತಡೆ ನೀಡಿತ್ತು. ಇದೀಗ ಆನಂದಯ್ಯ ಬಳಿ ಔಷಧಿ ಪಡೆದಿದ್ದ ಕೋಟಯ್ಯ ಎಂಬುವವರು ಮೃತಪಟ್ಟಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಕೋಟಯ್ಯ ಅವರನ್ನು ನೆಲ್ಲೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಈ ನಡುವೆ ಆನಂದಯ್ಯ ಟೀಂ ನ 3 ಸದಸ್ಯರಿಗೆ ಕೊರೊನಾ ಸೋಂಕು ತಗುಲಿದೆ. ಆನಂದಯ್ಯ ತಂಡದ 5 ಜನರಿಗೆ ಆರ್ ಟಿಪಿಸಿಆರ್ ಟೆಸ್ಟ್ ಮಾಡಲಾಗಿದ್ದು, ಅವರಲ್ಲಿ ಮೂವರಿಗೆ ಪಾಸಿಟಿವ್ ಬಂದಿದೆ. ಅಲ್ಲದೇ ಕೃಷ್ಣಪಟ್ಟಣಂ ಗ್ರಾಮದ 27 ಜನರು ಕೋವಿಡ್ ಗುಣಲಕ್ಷಣಗಳಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...