alex Certify BIG BREAKING: ಸಫಾಯಿ ಕರ್ಮಚಾರಿಗಳಿಗೆ ಎಲೆಕ್ಟ್ರಿಕ್ ಸ್ಕೂಟರ್ ಭಾಗ್ಯ; ಸಿಎಂ ಬೊಮ್ಮಾಯಿ ಘೋಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಸಫಾಯಿ ಕರ್ಮಚಾರಿಗಳಿಗೆ ಎಲೆಕ್ಟ್ರಿಕ್ ಸ್ಕೂಟರ್ ಭಾಗ್ಯ; ಸಿಎಂ ಬೊಮ್ಮಾಯಿ ಘೋಷಣೆ

ಬೆಂಗಳೂರು: ಸಫಾಯಿ ಕರ್ಮಚಾರಿಗಳಿಗೆ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆ ಮಾಡಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಘೋಷಿಸಿದ್ದಾರೆ.

ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಅಮೇರಿಕಾದಲ್ಲಿ ಕಸ ಗುಡಿಸುವವರು ಕಾರಿನಲ್ಲಿ ಬರುತ್ತಾರೆ. ಇನ್ಮುಂದೆ ನಮ್ಮಲ್ಲಿಯೂ ಕಸ ಗುಡಿಸುವವರು ಸ್ಕೂಟರ್ ನಲ್ಲಿ ಬರಲಿದ್ದಾರೆ. ಈಗ ಸ್ಕೂಟರ್ ಹತ್ತುವವರು ನಾಳೆ ಕಾರನ್ನು ಹತ್ತುತ್ತಾರೆ. ಬಡವರು, ದುಡಿಯುವವರ ಪರ ಇರುವ ಸರ್ಕಾರ ನಮ್ಮದು. ಈ ನಿಟ್ಟಿನಲ್ಲಿ 600 ಸಫಾಯಿ ಕರ್ಮಚಾರಿಗಳಿಗೆ ಸ್ಕೂಟರ್ ವಿತರಿಸಲಾಗುವುದು ಎಂದು ಘೋಷಿಸಿದರು.

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 100 ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಬಾಬು ಜಗಜೀವನರಾಮ್ ಯೋಜನೆಯಡಿ ನೀಡಲಾಗುವುದು. ಒಟ್ಟು 25 ಸಾವಿರ ಸ್ಕೂಟರ್ ವಿತರಣೆಗೆ ನಿರ್ಧರಿಸಲಾಗಿದ್ದು, ಯುವಕರು, ಮಹಿಳೆಯರು ಸ್ಕೂಟರ್ ಬಳಸಬಹುದಾಗಿದೆ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...