alex Certify ‘ಬಿಗ್ ಬಾಸ್’ ಗೆದ್ದು ಬರ್ತೀನಿ ಅಮ್ಮಾ…ಎಂದು ಹೋಗಿದ್ದ : ಇದೆಲ್ಲಾ ಪಿತೂರಿ ಎಂದು ಕಣ್ಣೀರಿಟ್ಟ ಸಂತೋಷ್ ತಾಯಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಬಿಗ್ ಬಾಸ್’ ಗೆದ್ದು ಬರ್ತೀನಿ ಅಮ್ಮಾ…ಎಂದು ಹೋಗಿದ್ದ : ಇದೆಲ್ಲಾ ಪಿತೂರಿ ಎಂದು ಕಣ್ಣೀರಿಟ್ಟ ಸಂತೋಷ್ ತಾಯಿ

ಬೆಂಗಳೂರು : ಅಮ್ಮಾ..ನಾನು ಬಿಗ್ ಬಾಸ್ ಟ್ರೋಫಿ ಗೆಲ್ಲುತ್ತೇನೆ ಎಂದು ಹಳ್ಳಿಯಿಂದ ಬಂದಿದ್ದ ಹೈದನ ಕನಸು ನುಚ್ಚು ನೂರಾಗಿದೆ. ಹೌದು, ಹುಲಿ ಉಗುರು ಧರಿಸಿದ್ದ ಬಿಗ್ ಬಾಸ್-10 ಸೀಸನ್ ನ ಸ್ಪರ್ಧಿ ವರ್ತೂರು ಸಂತೋಷ್ ಜೈಲು ಪಾಲಾಗಿದ್ದಾರೆ.

ಮಗ ಸಂತೋಷ್ ಜೈಲು ಸೇರಿದ್ದಕ್ಕೆ ಅವರ ತಾಯಿ ಮಂಜುಳಾ ಕಣ್ಣೀರಿಟ್ಟಿದ್ದಾರೆ. 10 ವರ್ಷಗಳ ಹಿಂದೆಯೇ ಮಗನಿಗೆ ನಾನೇ ಚೈನ್ ಮಾಡಿಸಿಕೊಟ್ಟಿದ್ದೆ. ಅದಕ್ಕೆ ಮಗ ಲಾಕೆಟ್ ಮಾಡಿಸಿಕೊಂಡಿದ್ದಾನೆ. ಹುಲಿ ಉಗುರು ಹಾಕೊಳ್ಳೋದು ತಪ್ಪು ಅಂತ ಗೊತ್ತಿರಲಿಲ್ಲ ಎಂದಿದ್ದಾರೆ. ನಾವು ನಮ್ಮ ಮಗ ಪ್ರಾಣಿಪ್ರಿಯರು. ಹುಲಿ ಉಗುರು ಅಂತ ಗೊತ್ತಿದ್ದರೆ ಹಾಕುತ್ತಿರಲಿಲ್ಲ ಎಂದಿದ್ದಾರೆ.

ಯಾರೋ ಬೇಕಂತಲೇ ಪಿತೂರಿ ಮಾಡಿದ್ದಾರೆ

ಯಾರೋ ಬೇಕಂತಲೇ ಪಿತೂರಿ ಮಾಡಿದ್ದಾರೆ. ಬೇಕಂತ ನನ್ನ ಮಗನನ್ನು ಜೈಲಿಗೆ ಕಳುಹಿಸಿದ್ದಾರೆ. ಬೆಳಿಯೋರನ್ನ ತುಳಿಯೋರು ಜಾಸ್ತಿ ಎಂದು ಮಂಜುಳಾ ಕಣ್ಣೀರಿಟ್ಟಿದ್ದಾರೆ. . ನನ್ನ ಮಗನಂತೆಯೇ ಬೇರೆಯವರು ಹುಲಿ ಉಗುರು ಧರಿಸಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಅವರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದಿದ್ದಾರೆ.

ಅಮ್ಮಾ..ನಾನು ಕೊನೆ ತನಕ ಬಿಗ್ ಬಾಸ್ ನಲ್ಲಿದ್ದು ಗೆದ್ದು ಬರ್ತೀನಿ ಅಂತ ಹೇಳಿ ಹೋಗಿದ್ದ ಅವನ ಸ್ನೇಹಿತನಿಂದ ಈ ವಿಚಾರ ನಮಗೆ ತಿಳಿಯಿತು ಎಂದು ಕಣ್ಣೀರು ಹಾಕಿದ್ದಾರೆ.

14 ದಿನ ಸೆರೆಮನೆ ವಾಸ

ಹುಲಿ ಉಗುರು ಧರಿಸಿದ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಗೆ ನ.6 ವರೆಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.2 ನೇ ಎಸಿಜೆಎಂ ನ್ಯಾಯಾಲಯದ ನ್ಯಾಯಾಧೀಶರು ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಗೆ ನ.6 ವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದು, ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...