alex Certify ನಾನು ಲೋಕಲ್ ರೋಲ್ ಕಾಲ್ ಕೊಡು ಎಂದು ಪಟಾಕಿ ಅಂಗಡಿ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾನು ಲೋಕಲ್ ರೋಲ್ ಕಾಲ್ ಕೊಡು ಎಂದು ಪಟಾಕಿ ಅಂಗಡಿ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ

ಬೆಂಗಳೂರು: ರೋಲ್ ಕಾಲ್ ನೀಡದ ಕಾರಣಕ್ಕೆ ಪಟಾಕಿ ಅಂಗಡಿ ಮಾಲೀಕನಿಗೆ ತೀವ್ರವಾಗಿ ತಿಳಿಸಿದ ಘಟನೆ ಆನೇಕಲ್‌ನಲ್ಲಿ ನಡೆದಿದೆ.

ರೋಲ್ ಕಾಲ್ ನೀಡದ ಪಟಾಕಿ ಮಾಲೀಕನಿಗೆ ಬಿಜೆಪಿ ಪುರಸಭೆ ಸದಸ್ಯೆ ಪತಿ ಮತ್ತು ಬಿಜೆಪಿ ಮುಖಂಡ ಚರಣ್ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ. ಹೊಸೂರು ಮುಖ್ಯ ರಸ್ತೆಯ ನೆರಳೂರು ಗೇಟ್ ಬಳಿ ಅಟ್ಟಾಡಿಸಿ ಪಟಾಕಿ ಅಂಗಡಿ ಮಾಲೀಕನ ಮೇಲೆ ಹಲ್ಲೆ ಮಾಡಲಾಗಿದೆ.

ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ನೆರಳೂರು ಗೇಟ್ ಬಳಿ ಘಟನೆ ನಡೆದಿದೆ. ಕಿರಣ್ ಮತ್ತು ಹರೀಶ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ನಾನು ಲೋಕಲ್ ಪಟಾಕಿ ಕೊಡು ಎಂದು ಚರಣ್ ಧಮ್ಕಿ ಹಾಕಿದ್ದಾನೆ. ಅಂಗಡಿ ಬಾಗಿಲು ಮುಚ್ಚಿದ್ದೇವೆ ಬೆಳಗ್ಗೆ ಬನ್ನಿ ಎಂದು ಹೇಳಿದ್ದಕ್ಕೆ ಅಟ್ಟಾಡಿಸಿ ಹಲ್ಲೆ ಮಾಡಲಾಗಿದೆ.

ಚಂದಾಪುರ ಪುರಸಭೆ ಸದಸ್ಯೆ ಪತಿ ಚರಣ್ ಮತ್ತು ಸಹಚರರಾದ ಚರಣ್, ತೇಜಸ್, ಹರೀಶ್, ಗುರುರಾಜ್ ಸೇರಿದಂತೆ 10 ಜನರು ಹಲ್ಲೆ ಮಾಡಿದ್ದಾರೆ. ಪಟಾಕಿ ಅಂಗಡಿ ಮಾಲೀಕನ ಎದೆ, ಹೊಟ್ಟೆ ಭಾಗದಲ್ಲಿ ಗಂಭೀರವಾದ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...