ಉತ್ತರಾಖಂಡ್ನ ಬದರಿನಾಥ ದೇವಾಲಯವು ಚಳಿಗಾಲದ ವಿರಾಮ ಪಡೆಯಲು ಕ್ಷಣಗನೆ ಆರಂಭವಾಗಿದೆ. ತೀವ್ರ ಚಳಿಯ ಕಾರಣದಿಂದಾಗಿ ಇಂದು ಈ ದೇವಾಲಯವನ್ನು ಬಂದ್ ಮಾಡುವ ಬಗ್ಗೆ ದಸರಾ ಹಬ್ಬದಂದೇ ಘೋಷಣೆ ಮಾಡಲಾಗಿತ್ತು. ದೇಗುಲವನ್ನು ಮುಚ್ಚಲು ಸಿದ್ಧತೆ ಭರದಿಂದ ಸಾಗಿದ್ದು 20 ಕ್ವಿಂಟಾಲ್ ಚೆಂಡು ಹೂವು, ಕಮಲ ಸೇರಿದಂತೆ ವಿವಿಧ ಹೂವುಗಳನ್ನು ತರಿಸಲಾಗಿದೆ. ದೇಗುಲದ ಪೋರ್ಟಲ್ಗಳು ಇಂದು ಸಂಜೆ 6:45ಕ್ಕೆ ಬಂದ್ ಆಗಲಿದೆ.
ವಿಜಯದಶಮಿಯಂದೇ ಚಳಿಗಾಲಕ್ಕೆ ದೇಗುಲ ಮುಚ್ಚುವ ಬಗ್ಗೆ ಘೋಷಣೆ ಮಾಡಲಾಗಿತ್ತು. ವಾರ್ಷಿಕ ಸಮಾರೋಪ ಸಮಾರಂಭ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬದರಿನಾಥ ದೇಗುಲಕ್ಕೆ ಆಗಮಿಸಿದ್ದಾರೆ.
ಕೇದಾರನಾಥ ಹಾಗೂ ಯಮುನೋತ್ರಿಯ ಬಾಗಿಲುಗಳನ್ನು ನವೆಂಬರ್ 6ರಂದು ಮುಚ್ಚಲಾಗಿದೆ. ತುಂಗನಾಥ ದೇವಾಲಯವು ಚಳಿಗಾಲದ ಹಿನ್ನೆಲೆಯಲ್ಲಿ ಅಕ್ಟೋಬರ್ 30ರಿಂದ ಬಂದ್ ಆಗಿದೆ. ಕೇದಾರ ಶ್ರೀ ಮದ್ಮಮಹೇಶ್ವರ ದೇವಾಲಯವು ನವೆಂಬರ್ 22ರಂದು ಮುಚ್ಚಲಿದೆ. ಹಾಗೂ ನವೆಂಬರ್ 25ರಂದು ಮದ್ಮಮಹೇಶ್ವರ ಜಾತ್ರೆ ಕೂಡ ನಡೆಯಲಿದೆ.
ನೈನಿತಾಲ್ ಹೈಕೋರ್ಟ್ ತೀರ್ಥಯಾತ್ರೆಯ ಮೇಲಿನ ನಿಷೇಧವನ್ನು ತೆರವುಗೊಳಿಸಿದ ಬಳಿಕ ಈ ವರ್ಷದ ಸೆಪ್ಟೆಂಬರ್ 18ರಿಂದ ದೇಗುಲ ದರ್ಶನ ಆರಂಭವಾಗಿದೆ. ಚಾರ್ ದೇಗುಲಗಳಿಗೆ ಈವರೆಗೆ 1.14 ಲಕ್ಷಕ್ಕೂ ಅಧಿಕ ಭಕ್ತಾದಿಗಳು ಭೇಟಿ ನೀಡಿದ್ದಾರೆ. ಭಕ್ತಾದಿಗಳ ದೈನಂದಿನ ಮಿತಿಯನ್ನು ಬದರಿನಾಥಕ್ಕೆ 1 ಸಾವಿರ, ಕೇದಾರನಾಥಕ್ಕೆ 800, ಗಂಗೋತ್ರಿಗೆ 600 ಹಾಗೂ ಯಮುನೋತ್ರಿಗೆ 400ಕ್ಕೆ ನಿರ್ಬಂಧಿಸಲಾಗಿದೆ.