alex Certify 500 ರೂ.ಗಾಗಿ ಸ್ನೇಹಿತನ ಶಿರಚ್ಛೇದ; ಕತ್ತರಿಸಿದ ತಲೆಯೊಂದಿಗೆ ಠಾಣೆಗೆ ಬಂದ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

500 ರೂ.ಗಾಗಿ ಸ್ನೇಹಿತನ ಶಿರಚ್ಛೇದ; ಕತ್ತರಿಸಿದ ತಲೆಯೊಂದಿಗೆ ಠಾಣೆಗೆ ಬಂದ

ಅಸ್ಸಾಂನಲ್ಲಿ 40 ವರ್ಷದ ವ್ಯಕ್ತಿಯೊಬ್ಬ 500 ರೂ. ವಿಚಾರಕ್ಕೆ ಸ್ನೇಹಿತನ ತಲೆ ಕತ್ತರಿಸಿದ್ದಾನೆ. ಕತ್ತರಿಸಿದ ತಲೆಯೊಂದಿಗೆ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.

ಮಂಗಳವಾರ ಬೆಳಗಿನ ಜಾವ 1:30 ರ ಸುಮಾರಿಗೆ ಸೋನಿತ್‌ ಪುರ ಜಿಲ್ಲೆಯ ರಂಗಪಾರ ಪೊಲೀಸ್ ಠಾಣೆ ವ್ಯಾಪ್ತಿಯ ದಯಾಲ್‌ ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತನಿರಾಮ್ ಮಾದ್ರಿ ಕೊಲೆ ಆರೋಪಿ. ಮಂಗಳವಾರ ಬೆಳಿಗ್ಗೆ ತುಂಡರಿಸಿದ ತಲೆ ಮತ್ತು ಮಚ್ಚಿನೊಂದಿಗೆ ರಂಗಪಾರ ಪೊಲೀಸ್ ಠಾಣೆಗೆ ತೆರಳಿದ್ದಾನೆ. ಬ್ರೈಲರ್ ಹೆಮ್ರಾಮ್ ಮೃತ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಇಬ್ಬರೂ ದಯಾಲ್‌ ಪುರ ಗ್ರಾಮದ ನಿವಾಸಿಗಳಾಗಿದ್ದಾರೆ.

ಪೋಲೀಸರ ಪ್ರಕಾರ, ಮಾದ್ರಿಯಿಂದ 500 ರೂ. ಸಾಲವನ್ನು ಪಡೆಯಲು ಹೆಮ್ರಾಮ್ ಬಯಸಿದ್ದ. ಆದರೆ, ಮಾದ್ರಿ ಸಾಲ ಕೊಡಲು ನಿರಾಕರಿಸಿದ್ದು, ಇಬ್ಬರ ನಡುವೆ ಜಗಳವಾಗಿದ್ದು, ಕೋಪದ ಭರದಲ್ಲಿ ಹೆಮ್ರಾಮ್‌ ಶಿರಚ್ಛೇದಕ್ಕೆ ಕಾರಣವಾಯಿತು.

ಗ್ರಾಮದಲ್ಲಿ ಫುಟ್ಬಾಲ್ ಪಂದ್ಯವಿತ್ತು. ಅಲ್ಲಿಗೆ ಹೋಗಲು 500 ರೂ.ಗಾಗಿ ಬೇಡಿಕೆ ಇಟ್ಟ ವೇಳೆ ಇಬ್ಬರ ನಡುವೆ ಜಗಳವಾಗಿದೆ. ನಂತರ ಗ್ರಾಮದಲ್ಲಿ ಆಯೋಜಿಸಿದ್ದ ಭೋಜನಕ್ಕೆ ತಡರಾತ್ರಿ ಮೇಕೆಗಳನ್ನು ಕಡಿಯಲು ಹೋಗುತ್ತಿದ್ದಾಗ ಮಾದ್ರಿ ಹೆಮ್ರಾಮ್‌ ನ ಶಿರಚ್ಛೇದ ಮಾಡಿದ್ದಾನೆ. ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...