alex Certify ಮದುವೆಗೆ ಒಪ್ಪದ ಯುವತಿಯ ಕುಟುಂಬಕ್ಕೆ ಸೇರಿದ ಅಡಕೆ, ಶುಂಠಿ ಬೆಳೆ ನಾಶ ಮಾಡಿದ ಯುವಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಗೆ ಒಪ್ಪದ ಯುವತಿಯ ಕುಟುಂಬಕ್ಕೆ ಸೇರಿದ ಅಡಕೆ, ಶುಂಠಿ ಬೆಳೆ ನಾಶ ಮಾಡಿದ ಯುವಕ

ಮೈಸೂರು: ಮದುವೆಗೆ ಒಪ್ಪದ ಯುವತಿಯ ಕುಟುಂಬಕ್ಕೆ ಸೇರಿದ ಅಡಕೆ, ಶುಂಠಿ ಬೆಳೆಯನ್ನು ಯುವಕ ನಾಶ ಮಾಡಿದ ಘಟನೆ ಹುಣಸೂರು ತಾಲೂಕಿನಲ್ಲಿ ನಡೆದಿದೆ.

ಕಡೇಮನುಗನಹಳ್ಳಿ ಗ್ರಾಮದ ಅಶೋಕ್ ಕೃತ್ಯವೆಸಗಿದ ಆರೋಪಿಯಾಗಿದ್ದಾನೆ. ಆತನ ವಿರುದ್ಧ ಹುಣಸೂರು ಗ್ರಾಮಾಂತರ ಠಾಣೆ ಪೋಲೀಸರಿಗೆ ದೂರು ನೀಡಲಾಗಿದೆ.

ರೈತ ವೆಂಕಟೇಶ್ ಅವರ ಪುತ್ರಿಯನ್ನು ಅಶೋಕನಿಗೆ ಕೊಟ್ಟು ಮದುವೆ ಮಾಡಲು ಮಾತುಕತೆ ನಡೆದಿತ್ತು. ಆತನ ವರ್ತನೆಯಿಂದ ಆತಂಕಗೊಂಡ ಪುತ್ರಿ ಮದುವೆಯಾಗಲು ನಿರಾಕರಿಸಿದ್ದಾಳೆ. ಇದರಿಂದ ಆಕ್ರೋಶಗೊಂಡ ಅಶೋಕ್, ಯುವತಿ ಕುಟುಂಬಕ್ಕೆ ಸೇರಿದ ಅರ್ಧ ಎಕರೆ ಜಮೀನಿನಲ್ಲಿ ಬೆಳೆದಿದ್ದ ಶುಂಠಿ ನಾಶ ಮಾಡಿದ್ದಾನೆ. ಪೊಲೀಸ್ ಠಾಣೆಗೆ ದೂರು ನೀಡಿದ ನಂತರ ಮತ್ತೆ 5 ವರ್ಷದ 800 ಅಡಕೆ ಗಿಡಗಳನ್ನು ನಾಶ ಮಾಡಿದ್ದಾನೆ. ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಗೆ ಬೆಂಕಿ ಹಚ್ಚಿದ್ದಾನೆ. ಇದರಿಂದಾಗಿ ಆತಂಕದ ನಡುವೆ ಜೀವನ ಸಾಗಿಸುವಂತಾಗಿದ್ದು, ಆರೋಪಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಲಾಗಿದೆ. ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...