alex Certify ತಿರುಪತಿ ತಿಮ್ಮಪ್ಪನ ಭಕ್ತರಿಗೆ ಸಿಹಿ ಸುದ್ದಿ: ಸಾಮಾನ್ಯ ಭಕ್ತರ ದರ್ಶನ, ವಸತಿ ವ್ಯವಸ್ಥೆ ಬದಲಾವಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಸಿಹಿ ಸುದ್ದಿ: ಸಾಮಾನ್ಯ ಭಕ್ತರ ದರ್ಶನ, ವಸತಿ ವ್ಯವಸ್ಥೆ ಬದಲಾವಣೆ

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ನಿತ್ಯವೂ ಅಪಾರ ಸಂಖ್ಯೆಯ ಭಕ್ತರು ಭೇಟಿ ನೀಡುತ್ತಾರೆ. ಹೀಗೆ ಬರುವ ಸಾಮಾನ್ಯ ಭಕ್ತರಿಗೆ ದೇವರ ದರ್ಶನ ವಿಳಂಬವಾಗುತ್ತಿದ್ದು, ಇದನ್ನು ತಪ್ಪಿಸುವ ಉದ್ದೇಶದಿಂದ ಟಿಟಿಡಿ ದರ್ಶನ ಸಮಯ ಮತ್ತು ವಸತಿ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿದೆ.

ಗಣ್ಯರಿಗಾಗಿ ಬೆಳಿಗ್ಗೆ 5.30ಕ್ಕೆ ದರ್ಶನದ ಸಮಯ ನಿಗದಿ ಮಾಡಿದ್ದು, ದೇವಾಲಯದಲ್ಲಿ ದೈನಂದಿನ ಧಾರ್ಮಿಕ ವಿಧಿ ವಿಧಾನಗಳು ನಡೆಯುವುದರಿಂದ ಗಣ್ಯ ವ್ಯಕ್ತಿಗಳು ಬೆಳಗ್ಗೆ 8 ಗಂಟೆ ಇಲ್ಲವೇ 9 ಗಂಟೆಯವರೆಗೆ ದೇವರ ದರ್ಶನ ಪಡೆಯುತ್ತಾರೆ. ಇದರಿಂದ ಸಾಮಾನ್ಯ ಭಕ್ತರು ಗಣ್ಯರ ದರ್ಶನ ಮುಗಿಯುವವರೆಗೆ ಕಂಪಾರ್ಟ್ ಮೆಂಟ್ ಗಳಲ್ಲಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಇದೆ. ಹೀಗಾಗಿ ಅಕ್ಟೋಬರ್ ನಿಂದ ಗಣ್ಯ ವ್ಯಕ್ತಿಗಳಿಗೆ ಬೆಳಗ್ಗೆ 5.30 ರ ಬದಲಿಗೆ 10 ಗಂಟೆಯಿಂದ ದರ್ಶನ ಆರಂಭಿಸಲಾಗುತ್ತದೆ.

ವಸತಿ ವ್ಯವಸ್ಥೆಗೆ ಅನುಕೂಲ ಕಲ್ಪಿಸಲು ತಿರುಮಲದಲ್ಲಿರುವ ವಸತಿ ಸೌಲಭ್ಯ ಹಂಚಿಕೆ ಕೇಂದ್ರೀಯ ವ್ಯವಸ್ಥೆ ಕಚೇರಿಯನ್ನು ತಿರುಪತಿಗೆ ಸ್ಥಳಾಂತರಿಸಲಾಗುತ್ತದೆ. ಟಿಟಿಡಿ 7500 ರೂಂಗಳನ್ನು ಹೊಂದಿದ್ದು, ಭಕ್ತರಿಗೆ ಅನುಕೂಲವಾಗುವಂತೆ ವಸತಿ ಸೌಲಭ್ಯ ಕಲ್ಪಿಸಲಾಗುತ್ತದೆ. ತಿರುಮಲದಲ್ಲಿ ವಸತಿ ಸೌಲಭ್ಯ ತಡವಾದಲ್ಲಿ ತಿರುಪತಿಯಲ್ಲಿ ಪರ್ಯಾಯ ವಸತಿ ವ್ಯವಸ್ಥೆಗೆ ಮಾಡಿಕೊಡಲಾಗುವುದು ಎಂದು ಹೇಳಲಾಗಿದೆ.

ತಿರುಪತಿ ದೇವಸ್ಥಾನದ(ಟಿಟಿಡಿ) ಟ್ರಸ್ಟಿಗಳ ಮಂಡಳಿಯು ಭಕ್ತರ ಅನುಕೂಲಕ್ಕಾಗಿ ಹಲವಾರು ನಿರ್ಣಯಗಳನ್ನು ಅಂಗೀಕರಿಸಿದೆ. ವಿಐಪಿ ಬ್ರೇಕ್ ದರ್ಶನದ ಸಮಯವನ್ನು ಮಾರ್ಪಡಿಸಲು, ಸ್ಲಾಟೆಡ್ ಸರ್ವ ದರ್ಶನ(ಎಸ್‌ಎಸ್‌ಡಿ) ವ್ಯವಸ್ಥೆಯನ್ನು ಮರು-ಪರಿಚಯಿಸಲು ಮತ್ತು ಕಾಟೇಜ್ ಹಂಚಿಕೆ ವ್ಯವಸ್ಥೆಯನ್ನು ತಿರುಪತಿಗೆ ವರ್ಗಾಯಿಸಲು ಟಿಟಿಡಿ ನಿರ್ಧರಿಸಿದೆ.

SSD ಟೋಕನ್‌ ಗಳ ಭಕ್ತರು ತಮ್ಮ ಟೋಕನ್‌ಗಳಲ್ಲಿ ನಮೂದಿಸಿರುವಂತೆ ಸೂಕ್ತ ಸಮಯದಲ್ಲಿ ದರ್ಶನಕ್ಕೆ ಬರಬಹುದು. ದರ್ಶನದ ನಂತರ ಶೀಘ್ರದಲ್ಲೇ ಹಿಂತಿರುಗಬಹುದು. ಎಸ್‌.ಎಸ್‌.ಡಿ. ಟೋಕನ್‌ ಗಳನ್ನು ಸೀಮಿತ ಸಂಖ್ಯೆಯಲ್ಲಿ ಒದಗಿಸಲಾಗುವುದು. ಇದರಿಂದ ಯಾವುದೇ ರೀತಿಯ ದರ್ಶನ ಟಿಕೆಟ್‌ ಗಳಿಲ್ಲದೆ ಸಾಮಾನ್ಯ ಯಾತ್ರಿಕರ  ಪರಿಣಾಮ ಬೀರುವುದಿಲ್ಲ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...