alex Certify ಕಾಮದಾಹಕ್ಕೆ ಬಲಿಯಾದ ಮಹಿಳೆ: ಕೆಲಸಗಾರನೊಂದಿಗೆ ಸರಸವಾಡುವಾಗಲೇ ಸಿಕ್ಕಿ ಬಿದ್ದ ಸೊಸೆ, ಪ್ರಿಯಕರನ ಜೀವತೆಗೆದ ಮಾವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಮದಾಹಕ್ಕೆ ಬಲಿಯಾದ ಮಹಿಳೆ: ಕೆಲಸಗಾರನೊಂದಿಗೆ ಸರಸವಾಡುವಾಗಲೇ ಸಿಕ್ಕಿ ಬಿದ್ದ ಸೊಸೆ, ಪ್ರಿಯಕರನ ಜೀವತೆಗೆದ ಮಾವ

ತಿರುಪತಿ: ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ವೆಲುಗೋಡು ಮಂಡಲದ ಸಿಪಿ ನಗರದಲ್ಲಿ ವ್ಯಕ್ತಿಯೊಬ್ಬ ತನ್ನ 30 ವರ್ಷದ ಸೊಸೆ ಮತ್ತು ಆಕೆಯ 25 ವರ್ಷದ ಪ್ರಿಯಕರನನ್ನು ಕೊಲೆಗೈದಿದ್ದಾನೆ ಎಂದು ವರದಿಯಾಗಿದೆ.

ಏಕಾಂತದಲ್ಲಿದ್ದ ಅವರನ್ನು ಕಂಡ ಮಾವ ಆಕ್ರೋಶದಿಂದ ಈ ಕೃತ್ಯವೆಸಗಿದ್ದಾಣೆ. ಪ್ರಕರಣದ ವಿವರಗಳ ಪ್ರಕಾರ, ಮೃತ ಮಹಿಳೆಯನ್ನು ಮಲ್ಲಿಕಾರ್ಜುನ ಎಂಬುವನ ಎರಡನೇ ಪತ್ನಿ ಬೀಟ್ಲ ಚಿನ್ನಿ ಎಂದು ಗುರುತಿಸಲಾಗಿದೆ.

ವೃತ್ತಿಯಲ್ಲಿ ಕಟ್ಟಡ ಕೆಲಸಗಾರನಾಗಿರುವ ಚಂದಾ ಓಬುಲೇಸು ಎಂಬಾತನೊಂದಿಗೆ ಆಕೆ ವಿವಾಹೇತರ ಸಂಬಂಧ ಹೊಂದಿದ್ದಳು. ಮಲ್ಲಿಕಾರ್ಜುನ ಆತ್ಮಕುರ್ ಮಂಡಲದಲ್ಲಿ ತನ್ನ ಮೊದಲ ಹೆಂಡತಿಯನ್ನು ಭೇಟಿಯಾಗಲು ಹೋಗುತ್ತಿದ್ದ. ಅವನಿಲ್ಲದ ವೇಳೆ ದಾರಿ ತಪ್ಪಿದ ಚಿನ್ನಿ ಈ ಹಿಂದೆ ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಓಬುಲೇಸು ಜೊತೆಗೆ ಅಕ್ರಮ ಸಂಬಂಧ ಬೆಳೆಸಿದ್ದಳು. ಇಬ್ಬರೂ ಆಗಾಗ ಸೇರುತ್ತಿದ್ದರು.

ಮಲ್ಲಿಕಾರ್ಜುನನ ತಂದೆ ರಾಮಣ್ಣ ಅವರಿಗೆ ಸೊಸೆ ಮತ್ತು ಮನೆಯಲ್ಲಿ ಹಿಂದೆ ಕೆಲಸ ಮಾಡುತ್ತಿದ್ದ ಓಬಲೇಸು ನಡುವೆ ಅಕ್ರಮ ಸಂಬಂಧ ಬೆಳೆದಿರುವುದು ಗೊತ್ತಾಗಿದೆ. ಅವರ ವಿವಾಹೇತರ ಸಂಬಂಧದ ಬಗ್ಗೆ ತಿಳಿದಕೊಂಡ ರಾಮನಯ್ಯ ಒಂದು ವಾರದ ಹಿಂದೆ ಚಿನ್ನಿ ಮತ್ತು ಓಬುಲೇಸುಗೆ ಸಂಬಂಧವನ್ನು ಕೊನೆಗೊಳಿಸುವಂತೆ ಎಚ್ಚರಿಸಿದ್ದಾರೆ.

ಆದರೆ, ಇಬ್ಬರೂ ಎಚ್ಚರಿಕೆಗೆ ಕಿವಿಗೊಡಲಿಲ್ಲ. ಶುಕ್ರವಾರ ರಾತ್ರಿ ರಾಮಣ್ಣ ಚಿನ್ನಿ ಮತ್ತು ಓಬುಲೇಶುವನ್ನು ನೋಡಬಾರದ ಸ್ಥಿತಿಯಲ್ಲಿ ಕಂಡ ಅವರನ್ನು ಪಿಕಾಕ್ಸ್‌ ಹೊಡೆದು ಕೊಂದು ಪರಾರಿಯಾಗಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಬಂದು ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿ ಬಂಧನಕ್ಕೆ ಕ್ರಮಕೈಗೊಳ್ಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...