alex Certify ಅಡುಗೆ ಪಾತ್ರೆಯಲ್ಲಿ ಕುಳಿತು ಕಲ್ಯಾಣ ಮಂಟಪಕ್ಕೆ ಹೋದ ವಧು – ವರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಡುಗೆ ಪಾತ್ರೆಯಲ್ಲಿ ಕುಳಿತು ಕಲ್ಯಾಣ ಮಂಟಪಕ್ಕೆ ಹೋದ ವಧು – ವರ…!

ಆಲಪ್ಪುಳ: ಕಳೆದ ಮೂರು ದಿನಗಳಿಂದ ಕೇರಳದಲ್ಲಿ ಭಾರಿ ಮಳೆಯಿಂದ ಪ್ರವಾಹವುಂಟಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರವಾಹ ಹಾಗೂ ಭೂಕುಸಿತದಿಂದ ದುರಂತ ಸಂಭವಿಸಿದೆ. ಈ ನಡುವೆ ಆಹ್ಲಾದಕರ ವಿಡಿಯೋವೊಂದು ಸದ್ಯ ವೈರಲ್ ಆಗಿದೆ.

ಭಾರಿ ಮಳೆಯಿಂದ ಪ್ರವಾಹವುಂಟಾಗಿದ್ದು, ರಸ್ತೆ ನದಿಗಳಂತಾಗಿವೆ. ವಧು-ವರರು ಕಲ್ಯಾಣಮಂಟಪ ಪ್ರವೇಶಿಸಲು ಪ್ರವಾಹದ ಮಧ್ಯೆ ಅಲ್ಯೂಮಿನಿಯಂ ಅಡುಗೆ ಪಾತ್ರೆಯಲ್ಲಿ ಕುಳಿತು ಮದುವೆ ಮಂಟಪವನ್ನು ತಲುಪಿದ್ದಾರೆ.

ಸಭಾಂಗಣದಲ್ಲಿ ಕೂಡ ನೀರು ತುಂಬಿದ್ದು, ಸೀಮಿತ ಸಂಬಂಧಿಕರೊಂದಿಗೆ ನೂತನ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನೂತನ ವಧು-ವರರಾದ ಆಕಾಶ್ ಮತ್ತು ಐಶ್ವರ್ಯ ಅಡುಗೆ ಪಾತ್ರೆಯಲ್ಲಿ ಪ್ರಯಾಣಿಸುತ್ತಿರುವ ವಿಡಿಯೋ ಮಾಧ್ಯಮದಲ್ಲಿ ಬಿತ್ತರವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...