alex Certify ಅಹಮದಾಬಾದನ್ನು ಅದಾನಿಬಾದ್ ಎಂದು ಬದಲಿಸಿ; ಕೆ.ಟಿ. ರಾಮರಾವ್ ವ್ಯಂಗ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಹಮದಾಬಾದನ್ನು ಅದಾನಿಬಾದ್ ಎಂದು ಬದಲಿಸಿ; ಕೆ.ಟಿ. ರಾಮರಾವ್ ವ್ಯಂಗ್ಯ

ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಹೈದರಾಬಾದ್ ಹೆಸರನ್ನು ಭಾಗ್ಯ ನಗರವೆಂದು ಬದಲಿಸುವುದಾಗಿ ಬಿಜೆಪಿ ನಾಯಕ ರಘುವರ ದಾಸ್ ಹೇಳಿದ್ದರು. ಇದಕ್ಕೆ ಈಗ ತೆಲಂಗಾಣ ಮಾಹಿತಿ ತಂತ್ರಜ್ಞಾನ ಸಚಿವ ಕೆ.ಟಿ. ರಾಮರಾವ್ ತಿರುಗೇಟು ನೀಡಿದ್ದಾರೆ.

ಗೌತಮ್ ಅದಾನಿ ಜೊತೆ ಬಿಜೆಪಿ ನಾಯಕರು ನಿಕಟವಾಗಿರುವುದನ್ನು ಪರೋಕ್ಷವಾಗಿ ಪ್ರಸ್ತಾಪಿಸಿರುವ ಕೆ.ಟಿ. ರಾಮರಾವ್, ಗುಜರಾತಿನ ಅಹಮದಾಬಾದನ್ನು ಅಲ್ಲಿನ ಸರ್ಕಾರ ಅದಾನಿ ಬಾದ್ ಎಂದು ಬದಲಿಸಲಿ ಎಂದು ವ್ಯಂಗ್ಯವಾಡಿದ್ದಾರೆ.

ಅಧಿಕಾರಕ್ಕೆ ಬಂದರೆ ತೆಲಂಗಾಣವನ್ನು ಭಾಗ್ಯ ನಗರವನ್ನಾಗಿ ಮಾಡುವುದಾಗಿ ಹೇಳಿರುವ ರಘುವರ ದಾಸ್ ಟ್ವೀಟನ್ನು ಟ್ಯಾಗ್ ಮಾಡಿರುವ ಕೆ.ಟಿ. ರಾಮರಾವ್, ಅಂದಹಾಗೆ ಈ ಜುಮ್ಲಾ ಜೀವಿ ಯಾರು ಎಂದು ಕುಟುಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...