alex Certify ಸ್ನೇಹಿತನನ್ನು ಮನೆಗೆ ಆಹ್ವಾನಿಸಿ ಕತ್ತು ಕೊಯ್ದ ಪಾಪಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ನೇಹಿತನನ್ನು ಮನೆಗೆ ಆಹ್ವಾನಿಸಿ ಕತ್ತು ಕೊಯ್ದ ಪಾಪಿ..!

ವ್ಯಕ್ತಿಯೊಬ್ಬ ತನ್ನ ಸ್ನೇಹಿತನನ್ನೇ ಕೊಲೆ ಮಾಡಿ ಶವದ ತಲೆ ಹಾಗೂ ದೇಹವನ್ನು ಪ್ರತ್ಯೇಕಿಸಿದ್ದು ಮಾತ್ರವಲ್ಲದೇ ಎರಡು ಬೇರೆ ಬೇರೆ ಪ್ಲಾಸ್ಟಿಕ್ ಚೀಲಗಳಲ್ಲಿ ಇವುಗಳನ್ನು ತುಂಬಿ ಕೆರೆಯಲ್ಲಿ ಎಸೆದ ಆಘಾತಕಾರಿ ಘಟನೆಯು ಅಹಮದಾಬಾದ್​ನಲ್ಲಿ ನಡೆದಿದೆ.

ದಾನಿಮಿಲ್ಡಾ ಪ್ರದೇಶದ ಮಜರ್​ ಖುರೇಶಿ ಎಂಬವನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಖುರೇಶಿ ಹಾಗೂ ಮೃತ ಶಾರೂಕ್​ ಸೈಯದ್​​ ದೀರ್ಘಕಾಲದ ಗೆಳೆಯರಾಗಿದ್ದರು. ಒಮ್ಮೆ ಖುರೇಶಿ ಸಹೋದರಿ ಶಾರೂಕ್​ ಬಗ್ಗೆ ದೂರಿದ್ದರು. ಶಾರೂಕ್​ ತನ್ನ ಗೆಳತಿಯ ಜೊತೆ ನಮ್ಮ ಮನೆಗೆ ಬಂದು ಅಶ್ಲೀಲವಾಗಿ ವರ್ತಿಸಿದ್ದಾನೆ ಎಂದು ಸಹೋದರಿ ಅಸಮಾಧಾನ ಹೊರ ಹಾಕಿದ್ದಳು. ಈ ಬಗ್ಗೆ ಖುರೇಶಿ ತನ್ನ ಸ್ನೇಹಿತ ಶಾರೂಕ್​ ಜೊತೆ ಮಾತನಾಡಿದ್ದನು. ಆದರೆ ಇದೇ ವಿಚಾರವಾಗಿ ಇಬ್ಬರ ನಡುವಿನ ಮಾತುಕತೆ ಜಗಳಕ್ಕೆ ಮಾರ್ಪಟ್ಟಿತ್ತು. ಇದರಿಂದ ಕೋಪಗೊಂಡ ಖುರೇಶಿ ಶಾರೂಕ್​ ಕೊಲೆ ನಿರ್ಧರಿಸಿದ್ದನು.

ಸೆಪ್ಟೆಂಬರ್​ 16ರಂದು ಖುರೇಶಿ ತನ್ನ ಸ್ನೇಹಿತ ಸೈಯದ್​ಗೆ  ಆಹ್ವಾನಿಸಿದ್ದನು. ಸೈಯದ್​ಗೆ ಮದ್ಯ ಕುಡಿಸಿದ್ದನು. ಮದ್ಯ ಕುಡಿದ ಬಳಿಕ ಸೈಯದ್​ ನಿದ್ದೆಗೆ ಜಾರಿದ್ದನು. ಸ್ನೇಹಿತ ನಿದ್ದೆಗೆ ಜಾರಿದ ಬಳಿಕ ಹರಿತವಾದ ಆಯುಧದಿಂದ ಖುರೇಶಿಯು ಸೈಯದ್​ನ ಶಿರಚ್ಛೇದ ಮಾಡಿದ್ದಾನೆ. ಬಳಿಕ ರುಂಡ ಹಾಗೂ ಮುಂಡವನ್ನು ಪ್ರತ್ಯೇಕ ಬ್ಯಾಗುಗಳಲ್ಲಿ ತುಂಬಿದ್ದಾನೆ. ದಾನಿಮಿಲ್ಡಾ ಪ್ರದೇಶ ಕೆರೆಯೊಂದರಲ್ಲಿ ಈ ಮೃತದೇಹದ ಎರಡೂ ಭಾಗಗಳನ್ನು ಎಸೆದಿದ್ದನು. ಈ ಸಂಬಂಧ ತನಿಖೆ ಆರಂಭಿಸಿದ ಪೊಲೀಸರು ಕೊಲೆ ಆರೋಪಿಯನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...