alex Certify ಬಾಳು ಕೊಡುವುದಾಗಿ ಹೇಳಿ ಎರಡು ಮಕ್ಕಳ ತಾಯಿಗೆ ಬಲೆ ಬೀಸಿದ್ದ 21ರ ಯುವಕ; ಕಾಡಿನಲ್ಲಿ ಬಿಟ್ಟು ಎಸ್ಕೇಪ್ ಆದ ಪೂಜಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಳು ಕೊಡುವುದಾಗಿ ಹೇಳಿ ಎರಡು ಮಕ್ಕಳ ತಾಯಿಗೆ ಬಲೆ ಬೀಸಿದ್ದ 21ರ ಯುವಕ; ಕಾಡಿನಲ್ಲಿ ಬಿಟ್ಟು ಎಸ್ಕೇಪ್ ಆದ ಪೂಜಾರಿ

ಮೈಸೂರು: ಎರಡು ಮಕ್ಕಳ ತಾಯಿಗೆ ಬಾಳು ಕೊಡುವುದಾಗಿ ಕರೆದೊಯ್ದ 21 ವರ್ಷದ ಯುವಕ ಪೂಜಾರಿ ಮಹಿಳೆಯನ್ನು ಕಾಡಿನ ಮಧ್ಯೆ ಬಿಟ್ಟು ಪರಾರಿಯಾಗಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕೊಲ್ಲೂಪುರ ಗ್ರಾಮದಲ್ಲಿ ನಡೆದಿದೆ.

10 ದಿನಗಳ ಹಿಂದೆ 21 ವರ್ಷದ ಅರ್ಚಕ ಸಂತೋಷ್ ಎಂಬಾತ 35 ವರ್ಷದ ಮಹಿಳೆಯನ್ನು ನಂಬಿಸಿ ಕರೆದೊಯ್ದಿದ್ದ. ಹತ್ತು ದಿನ ಆಕೆಯೊಂದಿಗೆ ಓಡಾಟ ನಡೆಸಿ ಇದೀಗ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿ ಕಾಡಂಚಿನ ನಿರ್ಜನ ಪ್ರದೇಶದಲ್ಲಿ ಬಿಟ್ಟು ನಾಪತ್ತೆಯಾಗಿದ್ದಾನೆ.

ಗ್ರಾಮಸ್ಥರ ಕಣ್ಣಿಗೆ ಬಿದ್ದ ಮಹಿಳೆ ಇದೀಗ ಪೊಲಿಸರಿಗೆ ದೂರು ನೀಡಿದ್ದು, ಯುವಕನನ್ನು ಹುಡುಕಿಕೊಡುವಂತೆ ಕಣ್ಣೀರಿಟ್ಟಿದ್ದಾಳೆ. ಕೊಲ್ಲುಪೂರ ಗ್ರಾಮದ ಮಹದೇಶ್ವರ ದೇವಸ್ಥಾನಕ್ಕೆ ಹೋಗಿದ್ದಾಗ ಮಹಿಳೆಗೆ ಅರ್ಚಕ ಪರಿಚಯವಾಗಿದ್ದಾನೆ. ಪರಿಚಯ ಸಲುಗೆಗೆ ತಿರುಗಿದ್ದು, ಮಹಿಳೆಗೆ ಬಾಳು ಕೊಡುವುದಾಗಿ ಹೇಳಿ ನಂಬಿಸಿ ಕರೆದೊಯ್ದಿದ್ದಾನೆ. ಈಗ ಕೈಕೊಟ್ಟು ಪರಾರಿಯಾಗಿದ್ದು, ಮಹಿಳೆ ಆತನೇ ಬೇಕು ಎಂದು ಪಟ್ಟು ಹಿಡಿದಿದ್ದಾಳೆ.

ಹುಲ್ಲಹಳ್ಳಿ ಠಾಣೆ ಪೊಲಿಸರು ಪ್ರಕರಣ ದಾಖಲಿಸಿಕೊಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...