alex Certify BIG NEWS: ವಿಶೇಷ ಚೇತನಳನ್ನು ಮದುವೆಯಾಗುವುದಾಗಿ ನಂಬಿಸಿ ಯುವಕನಿಂದ ವಂಚನೆ; FIR ದಾಖಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವಿಶೇಷ ಚೇತನಳನ್ನು ಮದುವೆಯಾಗುವುದಾಗಿ ನಂಬಿಸಿ ಯುವಕನಿಂದ ವಂಚನೆ; FIR ದಾಖಲು

ಬೆಂಗಳೂರು: ವಿಶೇಷ ಚೇತನಳನ್ನು ವಿವಾಹವಾಗುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣವನ್ನು ಆಕೆಯಿಂದ ದೋಚಿ ವಂಚಕ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸುರೇಂದ್ರ ಮೂರ್ತಿ ಎಂಬಾತ ವಿಶೇಷ ಚೇತನ ಯುವತಿಗೆ ಪರಿಚಯನಾಗಿ, ಇಬ್ಬರ ಪರಿಚಯ ಪ್ರೀತಿಗೆ ತಿರುಗಿತ್ತು. ಪರಸ್ಪರ ನಂಬಿಕೆ ಹೆಚ್ಚುತ್ತಿದ್ದಂತೆ ಸುರೇಂದ್ರ ಮೂರ್ತಿ ತಾನು ಒಂದು ಬ್ಯುಸಿನೆಸ್ ಮಾಡುತ್ತಿದ್ದೇನೆ ಅದಕ್ಕೆ ಹಣ ಬೇಕು ಎಂದು ಹೇಳಿ ಯುವತಿ ಬಳಿಯಿಂದ ಹಣ ಪಡೆದಿದ್ದ. ತನ್ನನ್ನು ಮದುವೆಯಾಗಲು ಒಪ್ಪಿದ ಪ್ರಿಯತಮನಿಗಾಗಿ ಯುವತಿ ಸಾಲ ಮಾಡಿ, ಇದ್ದ ಒಡವೆಗಳನ್ನೂ ಅಡವಿಟ್ಟು ಹಣ ನೀಡಿದ್ದಳು.

ಹಣ ಪಡೆದ ಆಸಾಮಿ ತನ್ನ ಅಸಲಿ ವರಸೆ ತೋರಲು ಆರಂಭಿಸಿದ್ದಾನೆ. ಮದುವೆಯಾಗಲು ನಿರಾಕರಿಸಿದ್ದಾನೆ. ಅಲ್ಲದೇ ಹಣವನ್ನೂ ವಾಪಾಸ್ ನೀಡದೇ ಎಸ್ಕೇಪ್ ಆಗಿದ್ದಾನೆ. ಮೋಸ ಹೋಗಿದ್ದು ಗೊತ್ತಾಗುತ್ತಿದ್ದಂತೆ ಯುವತಿ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಯುವತಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಆರೋಪಿ ಸುರೇಂದ್ರ ಮೂರ್ತಿ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...