alex Certify ಇಬ್ಬರನ್ನು ಲವ್ ಮಾಡಿ ತಗಲಾಕೊಂಡ ಯುವಕ: ಕೊನೆಗೂ ರೋಚಕ ತಿರುವು ಪಡೆದ ತ್ರಿಕೋನ ಪ್ರೇಮಕಥೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಬ್ಬರನ್ನು ಲವ್ ಮಾಡಿ ತಗಲಾಕೊಂಡ ಯುವಕ: ಕೊನೆಗೂ ರೋಚಕ ತಿರುವು ಪಡೆದ ತ್ರಿಕೋನ ಪ್ರೇಮಕಥೆ….!

ಹಾಸನ: ಈ ಪ್ರೀತಿ-ಪ್ರೇಮ ಎಲ್ಲಾ ಪುಸ್ತಕದ ಬದನೆಕಾಯಿ ಅಂತಾ ನಟ ಉಪೇಂದ್ರ ಅವರ ಸಿನಿಮಾವೊಂದರ ಡೈಲಾಗ್, ನಿಜ ಜೀವನಕ್ಕೂ ಅಕ್ಷರಶಃ ಸತ್ಯವಾಗುತ್ತೆ. ಕೆಲವೊಬ್ಬರು ಇಬ್ಬಿಬ್ಬರನ್ನು ಪ್ರೀತಿಸಿ ಮೋಸ ಮಾಡುವಂಥವರೂ ಇದ್ದಾರೆ. ಹಾಗೆಯೇ ಇಲ್ಲೊಂದೆಡೆ ತ್ರಿಕೋನ ಪ್ರೇಮಕಥೆಯ ರೋಚಕ ಕ್ಲೈಮಾಕ್ಸ್ ಹಂತದ ಕಥೆ ಕೇಳಿದ್ರೆ ನಿಬ್ಬೆರಗಾಗ್ತೀರಾ..!

ಹೌದು, ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಗ್ರಾಮವೊಂದರ ಯುವಕ, ಏಕಕಾಲದಲ್ಲಿ ಅಕ್ಕ-ಪಕ್ಕದ ಊರಿನ ಯುವತಿಯರಿಬ್ಬರನ್ನು ಪ್ರೀತಿಸಿದ್ದಾನೆ. ಇನ್ನು ಯುವತಿಯೊಬ್ಬಳ ಕುಟುಂಬಸ್ಥರು ಇವರ ಪ್ರೀತಿಯ ವಿಚಾರ ತಿಳಿದು ಯುವಕನ ಕುಟುಂಬದ ಬಳಿ ಮದುವೆ ಪ್ರಸ್ತಾಪ ಮಾಡಿದ್ದಾರೆ. ಈ ವೇಳೆ ಮತ್ತೊಬ್ಬ ಯುವತಿಗೂ ಈ ವಿಷಯ ಗೊತ್ತಾಗಿ ಗಲಾಟೆ ನಡೆದಿದೆ. ಯುವಕ ಯಾರನ್ನು ವಿವಾಹವಾಗುವುದು ಅಂತಾ ಇಕ್ಕಟ್ಟಿಗೆ ಸಿಲುಕಿದ್ದರೆ, ಯುವತಿಯರು ಕೂಡ ಪಟ್ಟು ಬಿಡಲಿಲ್ಲ.

ಈ ತ್ರಿಕೋನ ಪ್ರೇಮಕಥೆಗೆ ಅಂತ್ಯ ಹಾಡಲು ಗ್ರಾಮಸ್ಥರು ನಿರ್ಧರಿಸಿದರು. ಮೂವರನ್ನು ಕೂರಿಸಿ ಪಂಚಾಯಿತಿ ಕರೆದರು. ಆದರೆ, ಇಬ್ಬರು ಯುವತಿಯರು ಕೂಡ ಆತ ತನಗೇ ಬೇಕು ಅಂತಾ ಪಟ್ಟು ಹಿಡಿದರು. ಒಬ್ಬಳಂತೂ ವಿಷ ಕುಡಿದೇ ಬಿಟ್ಟಳು. ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾದಳು.

ಶಿಕ್ಷಕಿ, ಪುತ್ರನ ಬರ್ಬರ ಹತ್ಯೆ: ಹಂತಕರಿಗೆ ಬಲೆ ಬೀಸಿದ ಖಾಕಿ

ಹುಡುಗಿ ಫೈನಲ್ ಮಾಡಲು ಟಾಸ್ ಮೊರೆ..!

ಇಷ್ಟೆಲ್ಲಾ ಆದ ಬಳಿಕ ಏನು ಮಾಡುವುದು ಎಂದು ರೋಸಿ ಹೋದ ಗ್ರಾಮದ ಹಿರಿಯರು ಕೊನೆಗೆ ಮೂರೂ ಕುಟುಂಬಕ್ಕೂ ಅಂತಿಮ ವಾರ್ನಿಂಗ್ ನೀಡಿದರು. ಹುಡುಗನನ್ನು ಯಾರು ಮದುವೆಯಾಗಬೇಕು ಅಂತಾ ತೀರ್ಮಾನ ಮಾಡಲು ಟಾಸ್ ಹಾಕುತ್ತೇವೆ. ಇಬ್ಬರಲ್ಲಿ ಯಾರು ಗೆಲ್ಲುತ್ತಾರೋ ಅವರು ಹುಡುಗನನ್ನು ವರಿಸಲಿ. ಇಷ್ಟೆಲ್ಲಾ ಆದರೂ ಲವರ್ ಬಾಯ್ ಮಾತ್ರ ತುಟಿ ಪಿಟಿಕ್ ಅನ್ನಲಿಲ್ಲ. ಟಾಸ್ ಆದ ಬಳಿಕ ಯಾರೂ ಮರು ಮಾತನಾಡುವ ಹಾಗಿಲ್ಲ, ಅಲ್ಲದೆ ಠಾಣೆ ಮೆಟ್ಟಿಲು ಹತ್ತುವ ಹಾಗಿಲ್ಲ ಅಂತಾ ಮೂವರಿಂದಲೂ ಅಗ್ರಿಮೆಂಟ್ ಗೆ ಸಹಿ ಮಾಡಿಸಲಾಯಿತು. ಇದಕ್ಕೆ ಯುವತಿಯರೂ ಒಪ್ಪಿ, ಟಾಸ್ ಹಾಕುವ ದಿನಕ್ಕಾಗಿ ಕಾಯುತ್ತಿದ್ದರು.

ಟಾಸ್ ಹಾಕುವ ದಿನ ಬಂದಾಗ ಗ್ರಾಮದ ಹಿರಿಯರು, ಮೂರು ಮನೆಯ ಕುಟುಂಬಸ್ಥರು ಸೇರಿದ್ರು. ಇನ್ನೇನು ನಾಣ್ಯ ಚಿಮ್ಮಬೇಕು ಅನ್ನೋವಷ್ಟರಲ್ಲಿ ಹುಡುಗ ಉಲ್ಟಾ ಹೊಡೆದಿದ್ದಾನೆ. ಅಲ್ಲಿಂದ ಓಡಿ ಹೋದ ಯುವಕ, ವಿಷ ಕುಡಿದವಳನ್ನೇ ತಾನು ಮದುವೆಯಾಗುವುದಾಗಿ ಹೇಳಿದ್ದಾನೆ.

ಕಥೆ ಇಲ್ಲಿಗೆ ಮುಗಿದಿಲ್ಲ. ಎರಡನೇ ಯುವತಿ ಮೊದಲ ಯುವತಿಗೆ ಶುಭ ಹಾರೈಸಿದ್ದಾಳೆ. ಆದರೆ, ಪ್ರೇಮಿ ಮೋಸ ಮಾಡಿದ್ದಕ್ಕಾಗಿ ಸಿಟ್ಟಿನಿಂದ ಆತನಿಗೆ ಕಪಾಳಮೋಕ್ಷ ಮಾಡಿ ಅಲ್ಲಿಂದ ಹೊರನಡೆದಿದ್ದಾಳೆ. ಕೊನೆಗೂ ಕಗ್ಗಂಟಾಗಿದ್ದ ತ್ರಿಕೋನ ಪ್ರೇಮಕಥೆಗೆ ಸುಖಾಂತ್ಯ ಸಿಕ್ಕಿತಲ್ಲ ಎಂದು ಗ್ರಾಮಸ್ಥರು ನಿಟ್ಟುಸಿರುಬಿಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...