alex Certify 10ನೇ ತರಗತಿ ಟಾಪರ್ ಆತ್ಮಹತ್ಯೆಗೆ ಶರಣು: ಶಾಲಾ ಪ್ರಾಂಶುಪಾಲ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

10ನೇ ತರಗತಿ ಟಾಪರ್ ಆತ್ಮಹತ್ಯೆಗೆ ಶರಣು: ಶಾಲಾ ಪ್ರಾಂಶುಪಾಲ ಅರೆಸ್ಟ್

10ನೇ ತರಗತಿಯ ಟಾಪರ್​ ಆತ್ಮಹತ್ಯೆಗೆ ಶರಣಾದ ಘಟನೆಯು ಚಿತ್ತೂರಿನ ಪಲಮನೇರ್​ ಎಂಬ ಪುಟ್ಟ ಪಟ್ಟಣದಲ್ಲಿ ನಡೆದಿದೆ. ಸೋಡಾ ಮಾರಾಟಗಾರನ ಪುತ್ರಿ ಮಿಸ್ಬಾ ಫಾತಿಮಾ ಎಂಬಾಕೆ ಆತ್ಮಹತ್ಯೆಗೆ ಶರಣಾಗಿದ್ದು ಈಕೆ ಗಂಗಾವರಂನ ಬ್ರಹ್ಮರ್ಷಿ ಪ್ರೌಢಶಾಲೆಯಲ್ಲಿ ಓದುತ್ತಿದ್ದಳು ಎನ್ನಲಾಗಿದೆ.‌

ಶಾಲೆಯ ಪ್ರಾಂಶುಪಾಲರ ಅನುಚಿತ ವರ್ತನೆಯಿಂದ ಬೇಸತ್ತ ವಿದ್ಯಾರ್ಥಿನಿ ಈ ನಿರ್ಧಾರ ಕೈಗೊಂಡಿದ್ದಾಳೆ ಎಂದು ಫಾತಿಮಾ ಕುಟುಂಬಸ್ಥರು ಆರೋಪಿಸಿದ್ದಾರೆ. ಪ್ರಾಂಶುಪಾಲ ರಮೇಶ್​​ ಈ ಶೈಕ್ಷಣಿಯ ವರ್ಷ ಪೂರ್ಣಗೊಳ್ಳುವ ಮುನ್ನವೇ ಮಿಸ್ಬಾಳಿಗೆ ವರ್ಗಾವಣೆ ಪ್ರಮಾಣ ಪತ್ರ ನೀಡಿದ್ದರು.

ರಮೇಶ್​​ನನ್ನ ಪಲಮನೇರ್​ ಪೊಲೀಸರು ಇಂದು ಬಂಧಿಸಿದ್ದಾರೆ. ಇವರ ವಿರುದ್ಧ 306, 506 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಶಾಲೆಯಿಂದಲೂ ರಮೇಶ್​​ರನ್ನು ಅಮಾನತುಗೊಳಿಸಲಾಗಿದೆ.

ಆತ್ಮಹತ್ಯೆ ಮಾಡಿಕೊಂಡ ಬಾಲಕಿಯ ಡೆತ್​ನೋಟ್​​​ ಪ್ರಾಂಶುಪಾಲರ ವಿರುದ್ಧ ಅನುಮಾನಕ್ಕೆ ಕಾರಣವಾಗಿದೆ. ಮಿಸ್ಬಾ ಫಾತಿಮಾಳ ಸಹಪಾಠಿಯ ತಂದೆಯು ನನ್ನ ಟಿಸಿಯನ್ನು ನೀಡುವಂತೆ ಪ್ರಾಂಶುಪಾಲರಿಗೆ ಒತ್ತಡ ಹೇರಿದ್ದರು. ನಾನು ಶಾಲೆಯಿಂದ ಹೊರ ಹೋದರೆ ತನ್ನ ಮಗಳು ಕ್ಲಾಸ್​ಗೆ ಮೊದಲ ಸ್ಥಾನ ಪಡೆಯುತ್ತಾಳೆ ಎಂಬುದು ಅವರ ಉದ್ಧೇಶವಾಗಿತ್ತು ಎಂದು ಬರೆಯಲಾಗಿದೆ.

ಆದರೆ ಮಿಸ್ಬಾ ಸಹಪಾಠಿಯ ತಂದೆಯು ರಾಜಕೀಯದಲ್ಲಿ ತೊಡಗಿಸಿಕೊಂಡಿರುವುದರಿಂದ ಅವರನ್ನು ಬಂಧಿಸಲು ಪೊಲೀಸರು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಮಿಸ್ಬಾ ಕುಟುಂಬಸ್ಥರು ಆರೋಪಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...