alex Certify ಹಸುವಿಗೆ ಕಾಳು ತಿನ್ನಿಸಲು ಹೋಗಿ ಅವಘಡ; ಕೃಷಿ ಸಚಿವರನ್ನು ತಿವಿಯಲು ಬಂದ ಆಕಳು; ತಪ್ಪಿದ ಅನಾಹುತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಸುವಿಗೆ ಕಾಳು ತಿನ್ನಿಸಲು ಹೋಗಿ ಅವಘಡ; ಕೃಷಿ ಸಚಿವರನ್ನು ತಿವಿಯಲು ಬಂದ ಆಕಳು; ತಪ್ಪಿದ ಅನಾಹುತ

ಬೆಳಗಾವಿ: ಕೃಷಿ ಸಚಿವ ಬಿ.ಸಿ.‌ ಪಾಟೀಲ್, ರೈತರಿಗಾಗಿ ಒಂದು ದಿನ ಕಾರ್ಯಕ್ರಮದಲ್ಲಿ ಹಸುವಿಗೆ ಕಾಳುಗಳನ್ನು ತಿನ್ನಿಸಲು ಹೋಗಿ, ಹಸು ಸಚಿವರ ಮೈಮೇಲೆ ಎಗರಲು ಬಂದ ಘಟನೆ ಬೆಳಗಾವಿ ಜಿಲ್ಲೆ ನಿಪ್ಪಾಣಿಯಲ್ಲಿ ನಡೆದಿದೆ.

ಸಚಿವ ಬಿ.ಸಿ. ಪಾಟೀಲ್ ನಿಪ್ಪಾಣಿಯಲ್ಲಿ ರೈತರಿಗಾಗಿ ಒಂದು ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಬ್ಬಿನ ಗದ್ದೆಯಲ್ಲಿ ಕಬ್ಬು ನಾಟಿ ಮಾಡಿ ಗಮನ ಸೆಳೆದರು. ಬಳಿಕ ಹಸುವಿಗೆ ದವಸ ತಿನ್ನಿಸಲೆಂದು ಮುಂದಾದಾಗ ಬೆದರಿದ ಹಸು ಸಚಿವರಿಗೆ ತಿವಿಯಲು ಬಂದಿದೆ. ಸ್ಥಳದಲ್ಲಿದ್ದವರೆಲ್ಲ ಗಾಬರಿಗೊಂಡು ದಿಕ್ಕಾಪಾಲಾಗಿ ಓಡಿದ್ದಾರೆ. ಕೃಷಿ ಸಚಿವ ಬಿ.ಸಿ. ಪಾಟೀಲ್ ಹಾಗೂ ಸಚಿವೆ ಶಶಿಕಲಾ ಜೊಲ್ಲೆ ಗೋವಿನಿಂದ ತಪ್ಪಿಸಿಕೊಂಡು ಓಡಿದ್ದಾರೆ.

ಘಟನೆಯಲ್ಲಿ ಹಸು ನಾಲ್ವರಿಗೆ ತಿವಿದಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಸ್ಥಳದಲ್ಲಿದ್ದವರು ಹರಸಾಹಸಪಟ್ಟು ಹಸುವನ್ನು ಹಿಡಿದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...