alex Certify ಹಪ್ಪಳಕ್ಕಾಗಿ ನಡೀತು ದೊಡ್ಡ ಗಲಾಟೆ; ರಣಾಂಗಣವಾದ ಮದುವೆ ಮನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಪ್ಪಳಕ್ಕಾಗಿ ನಡೀತು ದೊಡ್ಡ ಗಲಾಟೆ; ರಣಾಂಗಣವಾದ ಮದುವೆ ಮನೆ

ಮದುವೆ ಸಂಭ್ರಮದಲ್ಲಿರಬೇಕಾಗಿದ್ದ ವರ – ವಧುವಿನ ಕಡೆಯವರು ಊಟದ ಸಮಯದಲ್ಲಿ ಕೇವಲ ಹಪ್ಪಳಕ್ಕಾಗಿ ಹೊಡೆದಾಟ ಮಾಡಿಕೊಂಡಿದ್ದು, ಇದರಿಂದ ಮದುವೆ ಮನೆ ರಣಾಂಗಣವಾದ ಘಟನೆ ಕೇರಳದಲ್ಲಿ ನಡೆದಿದೆ.

ಕೇರಳದ ಹರಿಪಾಡ್ನ ಮುತ್ತಮ್ ಸಭಾಂಗಣದಲ್ಲಿ ಭಾನುವಾರದಂದು ಮದುವೆಯೊಂದು ನಡೆಯುತ್ತಿದ್ದು, ಈ ವೇಳೆ ವರನ ಕಡೆಯ ಒಬ್ಬರು ಹೆಚ್ಚುವರಿ ಹಪ್ಪಳ ಕೇಳಿದ್ದಾರೆ. ಆಗ ವಧುವಿನ ಕಡೆಯವರು ಹಪ್ಪಳ ಖಾಲಿಯಾಗಿದೆ ಎಂದಿದ್ದಾರೆ.

ಮೊದಲಿಗೆ ಮಾತಿಗೆ ಮಾತಿನಿಂದ ಶುರುವಾದ ಜಗಳ ಹೊಡೆದಾಟದ ಹಂತ ತಲುಪಿದೆ. ಕುರ್ಚಿ ಸೇರಿದಂತೆ ಕೈಗೆ ಸಿಕ್ಕ ವಸ್ತುಗಳಿಂದ ಬಡಿದಾಡಿಕೊಂಡಿದ್ದು, ಇದರಿಂದಾಗಿ ಸಭಾಂಗಣಕ್ಕೆ ಸುಮಾರು 2 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎನ್ನಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿ ಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...