alex Certify ಸ್ನೇಹಿತೆಯ ಭೇಟಿಗೆ ಹೋಗಿ ಹೊಲದಲ್ಲಿ ಸಿಕ್ಕಿ ಬಿದ್ದ; ಬಲವಂತದಲ್ಲಿ ಮದುವೆ ಮಾಡಿಸಿದ ಗ್ರಾಮಸ್ಥರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ನೇಹಿತೆಯ ಭೇಟಿಗೆ ಹೋಗಿ ಹೊಲದಲ್ಲಿ ಸಿಕ್ಕಿ ಬಿದ್ದ; ಬಲವಂತದಲ್ಲಿ ಮದುವೆ ಮಾಡಿಸಿದ ಗ್ರಾಮಸ್ಥರು

ಪಾಟ್ನಾ : ಯುವಕನೊಬ್ಬ ತನ್ನ ಸ್ನೇಹಿತೆಯನ್ನು ಭೇಟಿಯಾಗಲು ಹೊಲಕ್ಕೆ ಹೋಗಿದ್ದನ್ನು ಕಂಡ ಗ್ರಾಮಸ್ಥರು ಆತನಿಗೆ ಥಳಿಸಿ, ಅಲ್ಲಿಯೇ ಬಲವಂತವಾಗಿ ಮದುವೆ ಮಾಡಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಬಿಹಾರದ ಬೇಗುಸರಾಯ್ ನಲ್ಲಿ ನಡೆದಿದೆ. ಆದಿತ್ಯ ಕುಮಾರ್ ಎಂಬ ಯುವಕನನ್ನೇ ಗ್ರಾಮಸ್ಥರು ಮನಬಂದಂತೆ ಥಳಿಸಿ ಮದುವೆ ಮಾಡಿಸಿದ್ದಾರೆ.

BIG BREAKING: 5G ಮೊಬೈಲ್ ಸೇವೆ ಜಾರಿಗೆ ಕೇಂದ್ರ ನಿರ್ಧಾರ

ಈ ಯುವಕ ಗ್ರಾಮದಲ್ಲಿನ ಯುವತಿಯನ್ನು ಪ್ರೀತಿಸುತ್ತಿದ್ದ. ಈ ಸಂದರ್ಭದಲ್ಲಿ ಪ್ರತ್ಯೇಕವಾಗಿ ಮಾತನಾಡುವುದಕ್ಕಾಗಿ ಇವರಿಬ್ಬರು ಹೊಲವೊಂದಕ್ಕೆ ಹೋಗಿದ್ದಾರೆ. ಅದನ್ನು ಗಮನಿಸಿದ ಗ್ರಾಮಸ್ಥರು, ಏಕಾಏಕಿ ದಾಳಿ ನಡೆಸಿ ಯುವಕನನ್ನು ಹಿಡಿದು ಥಳಿಸಿದ್ದಾರೆ.

ಥಳಿಸಿದ ನಂತರ ಯುವಕನನ್ನು ತಮ್ಮ ವಶದಲ್ಲಿ ಇಟ್ಟುಕೊಂಡಿದ್ದಾರೆ. ಆ ನಂತರ ಯುವಕ ಹಾಗೂ ಯುವತಿಯ ಮನೆಯವರಿಗೆ ವಿಷಯ ತಿಳಿಸಿ, ಮದುವೆ ಮಾಡಿಸುವುದಾಗಿ ಹೇಳಿದ್ದಾರೆ. ಈ ಮದುವೆಗೆ ವಧುವಿನ ಪಾಲಕರು ಆಗಮಿಸಿದ್ದಾರೆ. ಆಗ ಬಲವಂತದಲ್ಲಿಯೇ ಮದುವೆ ಮಾಡಿದ್ದಾರೆ. ಆದರೆ, ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...