alex Certify ಸೋಲಾರ್ ನಿರ್ಮಾಣಕ್ಕೆ ಕೊಟ್ಟ ಭೂಮಿಯನ್ನೇ ಬ್ಯಾಂಕ್ ನಲ್ಲಿ ಅಡವಿಟ್ಟ ಕಂಪನಿ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋಲಾರ್ ನಿರ್ಮಾಣಕ್ಕೆ ಕೊಟ್ಟ ಭೂಮಿಯನ್ನೇ ಬ್ಯಾಂಕ್ ನಲ್ಲಿ ಅಡವಿಟ್ಟ ಕಂಪನಿ…..!

ತುಮಕೂರು : ಸೋಲಾರ್ ಪಾರ್ಕ್ ನಿರ್ಮಿಸುವುದಕ್ಕಾಗಿ ಜಿಲ್ಲೆಯ ರೈತರು, ಕಂಪನಿಯೊಂದಕ್ಕೆ ತಮ್ಮ ಜಮೀನು ಬಾಡಿಗೆ ನೀಡಿದ್ದರು. ಆದರೆ, ಕಂಪನಿಯವರು ಆ ಜಮೀನನ್ನೇ ಬ್ಯಾಂಕಿನಲ್ಲಿ ಅಡವಿಟ್ಟು ಹಣ ಪಡೆದಿರುವ ಆರೋಪ ಕೇಳಿ ಬಂದಿದೆ.

ಈ ಕುರಿತು ಆರೋಪಿಸಿರುವ ರೈತರು ತಾಲೂಕಿನ ತಿರುಮಣಿಯಲ್ಲಿ ಇರುವ ಕರ್ನಾಟಕ ಸೌರಶಕ್ತಿ ಅಭಿವೃದ್ಧಿ ನಿಗಮದ ಎದುರು ಪ್ರತಿಭಟನೆ ನಡೆಸಿದ್ದಾರೆ. ಸೋಲಾರ್ ಪಾರ್ಕ್ ನಿರ್ಮಾಣ ಮಾಡಬೇಕಾದರೆ ಗುತ್ತಿಗೆ ಆಧಾರದ ಮೇಲೆ ರೈತರ ಜಮೀನು ಪಡೆಯಬೇಕು. ಆದರೆ, ಅದನ್ನು ಪರಭಾರೆ ಮಾಡುವಂತಿಲ್ಲ. ಅಂತಹ ಜಮೀನಿನ ಮೇಲೆ ಸಾಲ ಪಡೆಯುವಂತಿಲ್ಲ ಎಂಬ ನಿಯಮವಿದೆ.

IAF ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಬೆಂಗಳೂರಿನ ಸೇನಾ ಆಸ್ಪತ್ರೆಗೆ ಶಿಫ್ಟ್

ಆದರೆ, ಇಲ್ಲಿ ಕಂಪನಿಯು ಕಾನೂನು ಉಲ್ಲಂಘಿಸಿ ಸಾಲ ಪಡೆದಿದೆ ಎಂದು ಶಕ್ತಿ ಸ್ಥಳ ರೈತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸದಾಶಿವರೆಡ್ಡಿ, ಪ್ರಧಾನ ಕಾರ್ಯದರ್ಶಿ ಆರ್.ಪಿ. ಸಾಂಬಸದಾಶಿವರೆಡ್ಡಿ ಆರೋಪಿಸಿ, ಪ್ರತಿಭಟನೆ ನಡೆಸಿದ್ದಾರೆ.

ರೈತರಿಗೆ ಮೋಸ ಮಾಡಿರುವ ಈ ಕಂಪನಿಯ ಗುತ್ತಿಗೆಯನ್ನು ಮೂರು ದಿನಗಳಲ್ಲಿ ರದ್ದು ಪಡಿಸಬೇಕು. ಇಲ್ಲವಾದರೆ ಹೋರಾಟ ಕೈಗೊಳ್ಳಲಾಗುವುದು ಎಂದು ರೈತರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...