alex Certify ಸುತ್ತಿಗೆಯಲ್ಲಿ ಬಡಿದು ವ್ಯಕ್ತಿಯನ್ನು ಕೊಂದಿದ್ದ ದಂಪತಿ ಅಂದರ್.​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುತ್ತಿಗೆಯಲ್ಲಿ ಬಡಿದು ವ್ಯಕ್ತಿಯನ್ನು ಕೊಂದಿದ್ದ ದಂಪತಿ ಅಂದರ್.​..!

ಗ್ರೇಟರ್​ ನೋಯ್ಡಾದ ಬಾದಲ್​ಪುರದಲ್ಲಿ ಬಾಡಿಗೆ ಅಪಾರ್ಟ್​ಮೆಂಟ್​ನಲ್ಲಿದ್ದ ವ್ಯಕ್ತಿಯೊಬ್ಬನನ್ನು ಸುತ್ತಿಗೆಯಿಂದ ಕೊಂದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ವ್ಯಕ್ತಿಯನ್ನು ನೀರಜ್​ ಕುಮಾರ್​ ಎಂದು ಗುರುತಿಸಲಾಗಿದೆ.

ಮೃತ ನೀರಜ್​ ಕಳೆದ 2 ವರ್ಷಗಳಿಂದ ಮಾಂತಾ ದೇವಿ ಎಂಬ ಆರೋಪಿ ಮಹಿಳೆಯ ಜೊತೆ ವಾಸವಿದ್ದ ಎನ್ನಲಾಗಿದೆ. ಆತನ ಕುಡಿತದ ಚಟದಿಂದಾಗಿ ಮಾಂತಾ ದೇವಿ ಬೇಸತ್ತಿದ್ದಳು ಎನ್ನಲಾಗಿದೆ.

ಮಾಂತಾದೇವಿಯು ಶ್ರವಣ್​ ದಾಸ್​ ಎಂಬಾತನನ್ನು ವಿವಾಹವಾಗಿದ್ದಳು. ಪತಿಗೆ ಕರೆ ಮಾಡಿದ್ದ ಮಾಂತಾ ದೇವಿ, ನೀರಜ್​ ಮದ್ಯ ಸೇವಿಸಿ ಆಗಾಗ ನನಗೆ ಥಳಿಸುತ್ತಾನೆ ಎಂದು ಹೇಳಿದ್ದಾಳೆ.

ಹೀಗಾಗಿ ದಂಪತಿ ನೀರಜ್​ನನ್ನು ಕೊಲೆ ಮಾಡಲು ಪ್ಲಾನ್​ ಮಾಡಿದ್ದರು. ಶುಕ್ರವಾರ ಮುಂಜಾನೆ ದಾಸ್​ ಬಾಡಿಗೆ ಮನೆಗೆ ಬಂದಿದ್ದಾರೆ. ಇಬ್ಬರ ನಡುವೆ ವಾದ ಏರ್ಪಟ್ಟಿದೆ. ಇದರಿಂದ ಕೋಪಗೊಂಡ ದಾಸ್​ ಸುತ್ತಿಗೆಯಿಂದ ನೀರಜ್​ ಮುಖಕ್ಕೆ ಬಾರಿಸಿದ್ದಾನೆ. ಅಲ್ಲದೇ ಟಿಫಿನ್​ ಬಾಕ್ಸ್​ ಬಳಸಿ ಕೂಡ ನೀರಜ್​ ಮೇಲೆ ದಾಳಿ ನಡೆಸಿದ್ದಾನೆ.

ಬಾಡಿಗೆದಾರ ನೀರಜ್​ ನೆಲದ ಮೇಲೆ ಬಿದ್ದಿದ್ದನ್ನು ಕಂಡು ಮನೆ ಮಾಲೀಕ ಪೊಲೀಸರಿಗೆ ಕರೆ ಮಾಡಿದ್ದಾನೆ. ಪೊಲೀಸರು ತನಿಖೆ ನಡೆಸಿದ ಬಳಿಕ ನಿಜಾಂಶ ಬೆಳಕಿಗೆ ಬಂದಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...