alex Certify ಸಿಡಿಎಸ್​ ಜನರಲ್​ ಬಿಪಿನ್​ ರಾವತ್​​ ಹೆಲಿಕಾಪ್ಟರ್​ ಪತನ: ತನಿಖಾ ವರದಿ ಕೇಂದ್ರ ರಕ್ಷಣಾ ಸಚಿವರಿಗೆ ಸಲ್ಲಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಡಿಎಸ್​ ಜನರಲ್​ ಬಿಪಿನ್​ ರಾವತ್​​ ಹೆಲಿಕಾಪ್ಟರ್​ ಪತನ: ತನಿಖಾ ವರದಿ ಕೇಂದ್ರ ರಕ್ಷಣಾ ಸಚಿವರಿಗೆ ಸಲ್ಲಿಕೆ

ಸಿಡಿಎಸ್​ ಜನರಲ್​ ಬಿಪಿನ್​ ರಾವತ್​ ಹಾಗೂ ಇತರೆ 13 ಮಂದಿಯಿದ್ದ ಹೆಲಿಕಾಪ್ಟರ್​ ಪತನಕ್ಕೆ ಪ್ರತಿಕೂಲ ಹವಾಮಾನವೇ ಕಾರಣ ಎಂಬ ಸಂಶೋಧನಾ ವರದಿಯನ್ನು ಐಎಎಫ್​ ಉನ್ನತ ಅಧಿಕಾರಿಗಳು ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​​ರಿಗೆ ಸಲ್ಲಿಸಿದ್ದಾರೆ.

ಡಿಸೆಂಬರ್​ 8ರಂದು ತಮಿಳುನಾಡಿನಲ್ಲಿ ನಡೆದ ಹೆಲಿಕಾಪ್ಟರ್​ ಅವಘಡದಲ್ಲಿ ಸಿಡಿಎಸ್​ ಜನರಲ್​ ಬಿಪಿನ್​ ರಾವತ್​ ಅವರ ಪತ್ನಿ ಮಧುಲಿಕಾ ರಾವತ್​ ಸೇರಿದಂತೆ 14 ಮಂದಿ ಸಾವನನ್ಪಪ್ಪಿದ್ದರು.

ಸಂಶೋಧನಾ ವರದಿಯಲ್ಲಿ ಈ ಅವಘಡವು ಮಾನವ ದೋಷದಿಂದ ಅಥವಾ ಯಾವುದೇ ತಾಂತ್ರಿಕ ದೋಷದಿಂದ ಈ ದುರಂತ ಸಂಭವಿಸಿಲ್ಲ ಎಂದು ತಿಳಿದುಬಂದಿದೆ ಎನ್ನಲಾಗಿದೆ.

ತನಿಖೆಯ ಆವಿಷ್ಕಾರಗಳ ಕುರಿತು ಇನ್ನೂ ಯಾವುದೇ ಅಧಿಕೃತ ಮಾಹಿತಿ ಇಲ್ಲದೇ ಇದ್ದರೂ ಜನರಲ್​ ರಾವತ್​ ಹಾಗೂ ಇತರೆ ಅಧಿಕಾರಿಗಳನ್ನು ಹೊತ್ತೊಯ್ಯುತ್ತಿದ್ದ ಎಂಐ – 17ವಿ 5 ಹೆಲಿಕಾಪ್ಟರ್​ ಹಠಾತ್​ ಕೆಟ್ಟ ಹವಾಮಾನವನ್ನು ಎದುರಿಸಿದೆ ಎಂದು ತನಿಖಾ ವರದಿಯು ಹೇಳಿದೆ ಎನ್ನಲಾಗಿದೆ. ಇದು ಕುನ್ನೂರು ಬಳಿಯ ಕಾಡಿನಲ್ಲಿ ಪತನವಾಗುವ ಮುನ್ನ ಮೇಲ್ಮೈನಲ್ಲಿ ಅಪ್ಪಳಿಸಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...