alex Certify ‘ಶಾವಿಗೆ’ ಒಣಗಿಸಿ ಕೆಲಸ ಕಳೆದುಕೊಂಡ ಮಹಿಳೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಶಾವಿಗೆ’ ಒಣಗಿಸಿ ಕೆಲಸ ಕಳೆದುಕೊಂಡ ಮಹಿಳೆ….!

ಇದೇನು……ಶಾವಿಗೆ ಒದಗಿಸಿದ್ದಕ್ಕೆ ಕೆಲಸ ಕಳೆದುಕೊಳ್ಳುವುದಾ ಎಂದು ಹುಬ್ಬೇರಿಸಬೇಡಿ. ಹೌದು, ಈ ಪ್ರಕರಣದಲ್ಲಿ ಮಹಿಳೆ ಕೆಲಸ ಕಳೆದುಕೊಂಡಿರುವುದು ನಿಜ. ಅಂದಹಾಗೆ ಈ ಮಹಿಳೆ ಶಾವಿಗೆ ಒಣಗಿಸಿದ್ದು ಬೆಳಗಾವಿಯ ಸುವರ್ಣ ಸೌಧದ ಎದುರು. ಈ ಕಾರಣಕ್ಕಾಗಿ ಈಗ ಆಕೆಯ ಕೆಲಸಕ್ಕೆ ಸಂಚಕಾರ ಬಂದಿದೆ.

ಬೆಳಗಾವಿಯ ಸುವರ್ಣ ಸೌಧದ ಮುಂದೆ ಶಾವಿಗೆ ಒಣಗಿಸುತ್ತಿರುವ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದನ್ನು ನೋಡಿದ ಬಹುತೇಕರು ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕವನ್ನು ಸರ್ಕಾರ ಎಷ್ಟರಮಟ್ಟಿಗೆ ನಿರ್ಲಕ್ಷಿಸುತ್ತಿದೆ ಎಂಬುದನ್ನು ಇದು ಬಿಂಬಿಸುತ್ತಿದೆ ಎಂದು ಹೇಳಿದ್ದರು.

ಆ ಭಾಗದ ಜನತೆಯ ಅನುಕೂಲಕ್ಕೆಂದು ಸುವರ್ಣಸೌಧ ಕಟ್ಟಿಸಲಾಗಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಶಾವಿಗೆ ಒಣಹಾಕಿದ್ದು ನಿರ್ವಹಣಾ ಸಿಬ್ಬಂದಿ ಮಹಿಳೆ ಎಂದು ಹೇಳಲಾಗಿದೆ. ಹೀಗಾಗಿ ಆಕೆಯನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...