alex Certify ವಾಲಿಬಾಲ್ ಆಟಕ್ಕೆ ಆರಂಭವಾದ ಜಗಳ; ಗಲಾಟೆ ಬಿಡಿಸಲು ಬಂದವನಿಗೆ ಚಾಕು ಇರಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಲಿಬಾಲ್ ಆಟಕ್ಕೆ ಆರಂಭವಾದ ಜಗಳ; ಗಲಾಟೆ ಬಿಡಿಸಲು ಬಂದವನಿಗೆ ಚಾಕು ಇರಿತ

ಬೆಂಗಳೂರು: ವಾಲಿಬಾಲ್ ಆಟಕ್ಕಾಗಿ ಯುವಕರ ಗುಂಪಿನ ನಡುವೆ ಜಗಳ ಆರಂಭವಾಗಿ ಗಲಾಟೆ ಬಿಡಿಸಲು ಬಂದ ವ್ಯಕ್ತಿಗೆ ಚಾಕು ಇರಿದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ದೊಡ್ಡಸಣ್ಣೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿ ವಾಲಿಬಾಲ್ ಆಟ ನಡೆಯುತ್ತಿತ್ತು. ಈ ವೇಳೆ ಅದೇ ಗ್ರಾಮದ ಯುವಕನೊಬ್ಬ ತನ್ನನ್ನೂ ಆಟಕ್ಕೆಸೇರಿಸಿಕೊಳ್ಳುವಂತೆ ಹೇಳಿದ್ದಾನೆ. ಆದರೆ ಯುವಕರ ಗುಂಪು ಇದಕ್ಕೆ ಒಪ್ಪಿಲ್ಲ. ಗಲಾಟೆ ಆರಂಭವಾಗಿದೆ. ಪರಸ್ಪರ ಯುವಕರು ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಕೆಲವರು ಜಗಳ ಬಿಡಿಸಿದ್ದಾರೆ. ಆಟಕ್ಕೆ ಸೇರಿಸಿಕೊಳ್ಳುವಂತೆ ಹೇಳಿದ್ದ ಅಪ್ರಾಪ್ತ ಯುವಕ ಕೋಪದಿಂದ ಹಲ್ಲೆಗೆ ಮುಂದಾಗಿದ್ದಾನೆ.

ಈ ವೇಳೆ ರವಿಕುಮಾರ್ ಎಂಬ ಯುವಕ ತಡೆಯಲು ಮುಂದಾಗಿದ್ದಾನೆ. ಅಪ್ರಾಪ್ತ ಯುವಕ ರವಿಕುಮಾರ್ ಮೇಲೆಯೇ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಚಾಕು ಇರಿತದಿಂದ ಗಾಯಗೊಂಡಿರುವ ಯುವಕನನ್ನು ದೇವನಹಳ್ಳಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...