alex Certify ರೈಲಿಗೆ ಸಿಲುಕಿ 30ಕ್ಕೂ ಹೆಚ್ಚು ಕುರಿಗಳ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲಿಗೆ ಸಿಲುಕಿ 30ಕ್ಕೂ ಹೆಚ್ಚು ಕುರಿಗಳ ಸಾವು

ರೈಲಿಗೆ ಸಿಲುಕಿ 30ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದ ಉಂಬ್ಳೆಬೈಲು ರಸ್ತೆ ಅಂಡರ್ ಬ್ರಿಡ್ಜ್ ಬಳಿ ನಡೆದಿದೆ.

ಸೋಮವಾರ ಸಂಜೆ ಈ ಘಟನೆ ನಡೆದಿದ್ದು, ಕುರಿಗಾಹಿಗಳು ಉಂಬ್ಳೆಬೈಲು ರಸ್ತೆಯಲ್ಲಿ ಕುರಿಗಳನ್ನು ಹೊಡೆದುಕೊಂಡು ಬರುತ್ತಿದ್ದಾಗ ಟ್ರಾಫಿಕ್ನಿಂದ ಗಾಬರಿಗೊಂಡ ಕುರಿಗಳು ಏಕಾಏಕಿ ರೈಲ್ವೆ ಹಳಿಗೆ ನುಗ್ಗಿವೆ.

ಇದೇ ಸಂದರ್ಭದಲ್ಲಿ ತಾಳಗುಪ್ಪ – ಮೈಸೂರು ಮಾರ್ಗದ ರೈಲು ಬರುತ್ತಿದ್ದು, ಇದಕ್ಕೆ ಸಿಲುಕಿ ಕುರಿಗಳು ಸಾವನ್ನಪ್ಪಿವೆ. ಕೆಲ ಹೊತ್ತಲ್ಲೇ ಇವುಗಳನ್ನು ರೈಲು ಹಳಿಗಳ ಮೇಲಿಂದ ತೆರವುಗೊಳಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...