alex Certify ‘ರಾಮ ನವಮಿ’ ಮೆರವಣಿಗೆ ವೇಳೆ ಹಿಂದುಗಳಿಗೆ ಮಜ್ಜಿಗೆ – ಪಾನಕ ವಿತರಿಸಿದ ಮುಸ್ಲಿಮರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ರಾಮ ನವಮಿ’ ಮೆರವಣಿಗೆ ವೇಳೆ ಹಿಂದುಗಳಿಗೆ ಮಜ್ಜಿಗೆ – ಪಾನಕ ವಿತರಿಸಿದ ಮುಸ್ಲಿಮರು

ಭಾನುವಾರದಂದು ನಡೆದ ರಾಮ ನವಮಿ ಮೆರವಣಿಗೆ ವೇಳೆ ಮುಸ್ಲಿಮರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರಿಗೆ ಮಜ್ಜಿಗೆ, ಪಾನಕ ಹಾಗೂ ನೀರು ವಿತರಿಸಿದ ಸೌಹಾರ್ದಯುತ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಕಲಬುರಗಿ ನಗರದ ಶೇಖ್ ರೋಜಾದ ಖಾದ್ರಿ ಚೌಕ್ ಮಸೀದಿ ಬಳಿ ಮೆರವಣಿಗೆ ಬಂದ ವೇಳೆ ಅಲ್ಲಿಯೇ ಟೆಂಟ್ ಹಾಕಿದ್ದ ಮುಸ್ಲಿಮರು ಮಜ್ಜಿಗೆ, ಪಾನಕ ವಿತರಿಸಿದ್ದಾರೆ. ಬಿರುಬಿಸಿಲಿನಲ್ಲಿ ಬಂದಿದ್ದವರು ಮಜ್ಜಿಗೆ, ಪಾನಕ ಕುಡಿದು ಬಳಿಕ ಕೈಕುಲುಕಿ ಧನ್ಯವಾದ ಅರ್ಪಿಸಿದ್ದಾರೆ.

ಈ ಕುರಿತಂತೆ ಮಾತನಾಡಿದ ಮುಖಂಡ ರಹಿಂ ಸಾಬ್, ಕಳೆದ ನಾಲ್ಕು ವರ್ಷಗಳಿಂದ ನಾವುಗಳು ಹಿಂದೂ ಸಹೋದರರಿಗೆ ಮಜ್ಜಿಗೆ, ಪಾನಕ ವಿತರಿಸುತ್ತಿದ್ದೇವೆ. ಇದಕ್ಕಾಗಿ ನಾವು ತಂಡವೊಂದನ್ನು ಕಟ್ಟಿಕೊಂಡಿದ್ದು ರಾಮನವಮಿ ಸಂದರ್ಭದಲ್ಲಿ ಪಾನಕ ನೀಡುತ್ತೇವೆ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...