alex Certify ರಾಜ್ಯಪಾಲರನ್ನು ಕರೆ ತರಲು ಹೋದಾಗಲೇ ಹೃದಯಾಘಾತ; ಚಿಕಿತ್ಸೆ ಫಲಕಾರಿಯಾಗದೆ ಚಾಲಕ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯಪಾಲರನ್ನು ಕರೆ ತರಲು ಹೋದಾಗಲೇ ಹೃದಯಾಘಾತ; ಚಿಕಿತ್ಸೆ ಫಲಕಾರಿಯಾಗದೆ ಚಾಲಕ ಸಾವು

Drivers On Hire in Bhubaneswar | Book Verified Drivers from Patra Travelsರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ವಿಮಾನ ನಿಲ್ದಾಣದಿಂದ ಕರೆತರಲು ಹೋಗಿದ್ದ ಕಾರು ಚಾಲಕನಿಗೆ ಅಲ್ಲಿಯೇ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ.

ಧಾರವಾಡ ಮೂಲದ 42 ವರ್ಷದ ರವಿಕುಮಾರ್ ಕಾಳೆ ಮೃತಪಟ್ಟವರಾಗಿದ್ದು, ಇವರು ಕಳೆದ 16 ವರ್ಷಗಳಿಂದ ಹಲವು ರಾಜ್ಯಪಾಲರುಗಳಿಗೆ ಕಾರು ಚಾಲಕರಾಗಿ ಕರ್ತವ್ಯ ನಿರ್ವಹಿಸಿದ್ದರು.

ಶನಿವಾರದಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಗಣ್ಯರ ಪ್ರವೇಶ ದ್ವಾರದ ಬಳಿ ಕಾರು ನಿಲ್ಲಿಸಿಕೊಂಡು ರಾಜ್ಯಪಾಲರಿಗಾಗಿ ಕಾಯುತ್ತಿರುವಾಗಲೇ ರವಿ ಅವರಿಗೆ ಹೃದಯಘಾತವಾಗಿತ್ತು.

ಕೂಡಲೇ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಭಾನುವಾರ ಬೆಳಗಿನ ಜಾವ 2-30 ರ ಸುಮಾರಿಗೆ ಮೃತಪಟ್ಟಿದ್ದಾರೆ. ಮೃತದೇಹವನ್ನು ರಾಜಭವನಕ್ಕೆ ತಂದಿದ್ದು ರಾಜ್ಯಪಾಲರೂ ಸೇರಿದಂತೆ ರಾಜಭವನದ ಸಿಬ್ಬಂದಿ ಅಂತಿಮ ನಮನ ಸಲ್ಲಿಸಿದ್ದಾರೆ. ಬಳಿಕ ಮೃತ ದೇಹವನ್ನು ಧಾರವಾಡಕ್ಕೆ ಕೊಂಡೊಯ್ಯಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...