alex Certify ರಮೇಶ್ ಕುಮಾರ್ ಹೆಣ್ಣಾಗಿ ಹುಟ್ಟಿ ಅನುಭವಿಸಲಿ; ಮುನಿರತ್ನ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಮೇಶ್ ಕುಮಾರ್ ಹೆಣ್ಣಾಗಿ ಹುಟ್ಟಿ ಅನುಭವಿಸಲಿ; ಮುನಿರತ್ನ ಆಕ್ರೋಶ

ಬೆಂಗಳೂರು: ಮಾಜಿ ಸ್ಪೀಕರ್ ರಮೇಶ್ ಕುಮಾರ್ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಿದ್ದರೂ ಅವರ ವಿರುದ್ಧ ಖಂಡನೆ ಮಾತ್ರ ಕಡಿಮೆಯಾಗಿಲ್ಲ. ರಮೇಶ್ ಕುಮಾರ್ ಮುಂದಿನ ಜನ್ಮದಲ್ಲಿ ಹೆಣ್ಣಾಗಿ ಹುಟ್ಟಿ ಅನುಭವಿಸಲಿ ಎಂದು ಸಚಿವ ಮುನಿರತ್ನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ರಮೇಶ್ ಕುಮಾರ್ ಹೆಣ್ಮಕ್ಕಳಿಗೆ ಮಾಡಿರುವ ಅಪಮಾನ ಮುಂದಿನ ಜನ್ಮದಲ್ಲಿ ಅವರು ಹೆಣ್ಣಾಗಿ ಹುಟ್ಟಿ ಆ ಸ್ಥಿತಿಯನ್ನು ಅನುಭವಿಸಲಿ. ಒಂದು ತಾಯಿ, ಹೆಂಡತಿ, ತಂಗಿ, ಮಗಳು ಎಲ್ಲವೂ ಆಗಿರುವ ಹೆಣ್ಣನ್ನು ಅತ್ಯಾಚಾರವಾದರೆ ಎಂಜಾಯ್ ಮಾಡಿ ಎಂದು ಹೇಳುವ ಅವರ ಮನಸ್ಥಿತಿ ಎಂಥಾದ್ದಿರಬಹುದು ಎಂಬುದನ್ನು ತೋರುತ್ತದೆ ಎಂದು ಕಿಡಿಕಾರಿದರು.

ಇಲ್ಲಿದೆ ಲಕ್ಷ ರೂ. ಒಳಗೆ ಸಿಗುವ ಟಾಪ್ ಬೈಕ್‌ ಗಳ ಪಟ್ಟಿ

ಓರ್ವ ಜವಾಬ್ದಾರಿಯುತ ಸ್ಥಾನದಲ್ಲಿರುವವರು, ಬುದ್ಧಿವಂತ ನಾಯಕ ಎನಿಸಿಕೊಂಡವರು ಇಂದು ನೀಡುತ್ತಿರುವ ಹೇಳಿಕೆಗಳನ್ನು ನೋಡಿದರೆ ಹೆಣ್ಣುಮಕ್ಕಳಿಗೆ ಅವರು ಎಷ್ಟು ಗೌರವ ಕೊಡಬಹುದು ಎಂಬುದು ಅರ್ಥವಾಗುತ್ತದೆ. ಒಂದು ಹೆಣ್ಣುಮಗುವಿನ ನೋವೇನು? ಅದರಲ್ಲೂ ಅತ್ಯಾಚಾರವಾದಂತ ಆಕೆ ಸ್ಥಿತಿ ಏನಿರಬಹುದು ಎಂಬುದನ್ನು ಯೋಚಿಸದೇ ಲಘುವಾಗಿ ಮಾತನಾಡಿ ಅಪಮಾನ ಮಾಡುತ್ತಿರುವುದು ಖಂಡನೀಯ. ರಮೇಶ್ ಕುಮಾರ್ ಬಹಿರಂಗವಾಗಿ ಕ್ಷಮೆಯಾಚಿಸಲಿ, ತಮ್ಮ ಮನಸ್ಥಿತಿಯನ್ನು ತಿದ್ದಿಕೊಳ್ಳಲಿ ಎಂದು ಆಗ್ರಹಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...