alex Certify ರಕ್ತಹೀನತೆಯಿಂದ ಬಳಲುತ್ತಿದ್ರೆ ಈ ಹಣ್ಣುಗಳನ್ನು ತಿನ್ನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಕ್ತಹೀನತೆಯಿಂದ ಬಳಲುತ್ತಿದ್ರೆ ಈ ಹಣ್ಣುಗಳನ್ನು ತಿನ್ನಿ

 

ಆರೋಗ್ಯ ಚೆನ್ನಾಗಿರಬೇಕಂದ್ರೆ ಹಣ್ಣುಗಳನ್ನು ತಿನ್ನಬೇಕು. ಕೆಲವು ಹಣ್ಣುಗಳಂತೂ ಅದೆಷ್ಟೋ ಕಾಯಿಲೆಗಳನ್ನು ಕೂಡ ದೂರ ಮಾಡುವ ಶಕ್ತಿ ಹೊಂದಿವೆ. ದ್ರಾಕ್ಷಿ ಕೂಡ ಇವುಗಳಲ್ಲೊಂದು. ದ್ರಾಕ್ಷಿ ಹಣ್ಣುಗಳನ್ನು ತಿನ್ನುವುದರಿಂದ ದೇಹದಲ್ಲಿನ ನೀರಿನ ಕೊರತೆ ನಿವಾರಣೆಯಾಗುತ್ತದೆ.

ರಕ್ತಹೀನತೆ ಇರುವವರು ದ್ರಾಕ್ಷಿ ಹಣ್ಣುಗಳನ್ನು ತಿನ್ನಬೇಕು. ದ್ರಾಕ್ಷಿ ಸೇವನೆಯಿಂದ ದೇಹದಲ್ಲಿ ರಕ್ತ ಉತ್ಪಾದನೆಯಾಗುತ್ತದೆ. ಅಧಿಕ ಕೊಲೆಸ್ಟ್ರಾಲ್ ಮತ್ತು ಅಧಿಕ ಬಿಪಿಯನ್ನೂ ಕಡಿಮೆ ಮಾಡುವ ಸಾಮರ್ಥ್ಯ ದ್ರಾಕ್ಷಿ ಹಣ್ಣುಗಳಲ್ಲಿದೆ. ನಿಮ್ಮ ದೇಹದಲ್ಲಿ ರಕ್ತದ ಕೊರತೆ ಇದ್ದರೆ ದುಂಡಗಿನ ದ್ರಾಕ್ಷಿಯನ್ನು ತಿನ್ನಿ.

ದ್ರಾಕ್ಷಿಯಲ್ಲಿ ಹಲವು ವಿಧಗಳಿವೆ. ಬೇರೆ ಬೇರೆ ಬಗೆಯ ದ್ರಾಕ್ಷಿಗಳಲ್ಲಿ ಬೇರೆಯೇ ತೆರನಾದ ಆರೋಗ್ಯಕರ ಅಂಶಗಳಿವೆ. ನೀವು ಮಾರುಕಟ್ಟೆಯಲ್ಲಿ ಕಪ್ಪು ಮತ್ತು ಹಸಿರು ದ್ರಾಕ್ಷಿಯನ್ನು ನೋಡಿರ್ತೀರಾ. ಅವುಗಳ ಸೇವನೆ ಅತ್ಯಂತ ಪ್ರಯೋಜನಕಾರಿ.

ದ್ರಾಕ್ಷಿಯನ್ನು ತಿನ್ನುವುದರಿಂದ ರಕ್ತದ ಕೊರತೆ ನಿವಾರಣೆಯಾಗುವುದರ ಜೊತೆಗೆ ದೇಹವು ತಂಪಾಗಿರುತ್ತದೆ. ದುರ್ಬಲ ದೃಷ್ಟಿ ಹೊಂದಿರುವವರು, ಕಣ್ಣಿನ ಸಮಸ್ಯೆ ಇರುವವರು ದ್ರಾಕ್ಷಿ ತಿನ್ನುವುದು ಒಳ್ಳೆಯದು. ಇದಲ್ಲದೆ ದ್ರಾಕ್ಷಿಯಲ್ಲಿ ಕಬ್ಬಿಣದ ಅಂಶ ಹೇರಳವಾಗಿದೆ. ನಿಮ್ಮ ದೇಹದಲ್ಲಿ ಐರನ್‌ ಕೊರತೆಯಿದ್ದರೆ ಅದು ಸಹ ನಿವಾರಣೆಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...