alex Certify ಮಹೇಂದ್ರ‌ ಸಿಂಗ್ ಧೋನಿ ಸರಳತೆಗೆ ಇಲ್ಲಿದೆ ಮತ್ತೊಂದು ಉದಾಹರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹೇಂದ್ರ‌ ಸಿಂಗ್ ಧೋನಿ ಸರಳತೆಗೆ ಇಲ್ಲಿದೆ ಮತ್ತೊಂದು ಉದಾಹರಣೆ

ಭಾರತ ಕ್ರಿಕೆಟ್ ತಂಡದ ಖ್ಯಾತ ಆಟಗಾರ ಮಹೇಂದ್ರ ಸಿಂಗ್ ಧೋನಿ ತಮ್ಮ ಸರಳತೆಯಿಂದ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಈ ಸರಳತೆಯೇ ಅವರನ್ನು ವಿಶಿಷ್ಟಚೇತನ ಅಭಿಮಾನಿಯೊಬ್ಬರ ಮನೆಗೆ ಕೊಂಡೊಯ್ದಿದೆ.

ಹಿಂದೆಂದೂ ಕಂಡರಿಯದ ರೀತಿಯಲ್ಲಿ ಐಪಿಎಲ್ ಟೂರ್ನಿಯಲ್ಲಿ ಹೀನಾಯ ಸೋಲಿನ ನಿರಾಶೆಯ ನಡುವೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿರುವ ಮಹೇಂದ್ರ ಸಿಂಗ್ ಧೋನಿ ಟೂರ್ನಿ ಮುಗಿಯುತ್ತಿದ್ದಂತೆಯೇ ಲಾವಣ್ಯ ಎಂಬ ವಿಶಿಷ್ಟಚೇತನ ಅಭಿಮಾನಿ ಮನೆಗೆ ತೆರಳಿ ಆಕೆಯೊಂದಿಗೆ ಕೆಲಕಾಲ ಸಂತಸದ ಮಾತನ್ನಾಡಿದ್ದಾರೆ.

ಈ ಹೃದಯಸ್ಪರ್ಶಿ ವಿಡಿಯೋವನ್ನು ಸಿ ಎಸ್ ಕೆಯ ಕಟ್ಟಾ ಅಭಿಮಾನಿಯಾಗಿರುವ ಲಾವಣ್ಯ ತನ್ನ ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ತನ್ನ ನೆಚ್ಚಿನ ಹೀರೋ ಜೊತೆಗೆ ಕಳೆದ ಆ ಕ್ಷಣವನ್ನು ನಾನೆಂದೂ ಮರೆಯಲಾರೆ ಎಂದು ಲಾವಣ್ಯ ಬರೆದುಕೊಂಡಿದ್ದಾರೆ.

ನಾನು ಧೋನಿ ಅವರನ್ನು ಭೇಟಿ ಮಾಡಿರುವುದನ್ನು ಬರೆಯಲು ಅಕ್ಷರಗಳೇ ಬರುತ್ತಿಲ್ಲ. ಅವರೊಬ್ಬ ಮೃದುಭಾಷಿ ಮತ್ತು ಸರಳ ವ್ಯಕ್ತಿತ್ವದ ನಾಯಕರಾಗಿದ್ದಾರೆ. ಅವರು ನನ್ನ ಹೆಸರಿನ ಸ್ಪೆಲ್ಲಿಂಗ್ ಅನ್ನು ಕೇಳಿದರು. ನನ್ನ ಕೈಗಳನ್ನು ನೇವರಿಸಿದರು. ಈ ಸಂದರ್ಭದಲ್ಲಿ ನನಗೆ ಅಳು ಬಂದಿತ್ತು. ಅವರು ನನಗೆ ಅಳಬೇಡಿ ಎಂದು ಕಣ್ಣೀರನ್ನು ಒರೆಸಿದರು. ಇದಕ್ಕಿಂತ ನನಗೆ ಬೇರೆ ಆನಂದ ಯಾವುದೂ ಇಲ್ಲ ಎಂದು ಲಾವಣ್ಯ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.

ನಾನು ಬಿಡಿಸಿದ ಅವರ ಚಿತ್ರವನ್ನು ಬೇಕೆಂದು ಕೇಳಿ ಪಡೆದರು. ಅವರು ನನ್ನೊಂದಿಗೆ ಮಾತನಾಡಿದ್ದನ್ನು ಎಂದೆಂದಿಗೂ ಮರೆಯಲಾರೆ. ಅವರು ತಮ್ಮ ಅತ್ಯಮೂಲ್ಯ ಸಮಯವನ್ನು ನನ್ನೊಂದಿಗೆ ಕಳೆದ ಆ ಕ್ಷಣಗಳನ್ನು ನಾನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...