alex Certify ಮಳೆಗಾಲದಲ್ಲಿ ಸೇವಿಸಿ ಇಮ್ಯುನಿಟಿ ಹೆಚ್ಚಿಸುವ ಈ ಕಷಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಳೆಗಾಲದಲ್ಲಿ ಸೇವಿಸಿ ಇಮ್ಯುನಿಟಿ ಹೆಚ್ಚಿಸುವ ಈ ಕಷಾಯ

ಮಳೆಗಾಲ ಬಂದಾಗ ಶೀತ, ಕೆಮ್ಮು ಶುರುವಾಗುತ್ತದೆ. ಟೀ – ಕಾಫಿ ಕುಡಿಯುವ ಬದಲು ಕಷಾಯ ಮಾಡಿಕೊಂಡು ಕುಡಿದರೆ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕಷಾಯದ ಪುಡಿ ಮಾಡುವ ವಿಧಾನ ಇದೆ ನೋಡಿ.

ಬೇಕಾಗುವ ಸಾಮಾಗ್ರಿಗಳು:

ಜೀರಿಗೆ – 3 ಟೇಬಲ್ ಸ್ಪೂನ್, ಕೊತ್ತಂಬರಿ ಬೀಜ – 10 ಟೇಬಲ್ ಸ್ಪೂನ್, 2 ಟೀ ಸ್ಪೂನ್ – ಕಾಳುಮೆಣಸು, 6 – ಏಲಕ್ಕಿ, 8 – ಲವಂಗ, ½ ಟೀ ಸ್ಪೂನ್ – ಅರಿಶಿನ, ½ ಟೀ ಸ್ಪೂನ್ – ಶುಂಠಿ ಪುಡಿ.

ಮಾಡುವ ವಿಧಾನ:

ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಕೊತ್ತಂಬರಿ, ಜೀರಿಗೆ, ಕಾಳುಮೆಣಸು ಹಾಕಿ ಸಣ್ಣ ಉರಿಯಲ್ಲಿ ಪರಿಮಳ ಬರುವವರೆಗೆ ಹುರಿದುಕೊಳ್ಳಿ. ನಂತರ ಏಲಕ್ಕಿ – ಲವಂಗ ಸೇರಿಸಿ ಸ್ವಲ್ಪ ಫ್ರೈ ಮಾಡಿಕೊಳ್ಳಿ.

ಇದು ತಣ್ಣಗಾದ ಮೇಲೆ ಒಂದು ಮಿಕ್ಸಿ ಜಾರಿಗೆ ಹಾಕಿ ಅರಿಶಿನ ಪುಡಿ, ಶುಂಠಿ ಪುಡಿ ಸೇರಿಸಿ ಚೆನ್ನಾಗಿ ಪುಡಿ ಮಾಡಿಕೊಂಡು ಒಂದು ಗ್ಲಾಸ್ ಜಾರಿನಲ್ಲಿ ತುಂಬಿಸಿಕೊಳ್ಳಿ.

ಕಷಾಯ ಮಾಡುವಾಗ ಒಂದು ಪಾತ್ರೆಗೆ 2 ಗ್ಲಾಸ್ ನೀರು ಸೇರಿಸಿ ಅದು ಕುದಿ ಬಂದಾಗ ಕಷಾಯ ಪುಡಿ ಹಾಕಿ ಕುದಿಸಿ. ನಂತರ ಬೆಲ್ಲ ಸೇರಿಸಿ ಬಿಸಿ ಬಿಸಿ ಇರುವಾಗಲೇ ಕುಡಿಯಿರಿ. ಈ ಕಷಾಯಕ್ಕೆ ನೀರಿನ ಜತೆ ಹಾಲು ಕೂಡ ಸೇರಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...