alex Certify BIG NEWS: ಹೊಟ್ಟೆ ನೋವಿದ್ದರೂ ವಿಚಾರಣೆಗೆ ಸಹಕಾರ; ನ್ಯಾಯಾಧೀಶರ ಮುಂದೆ H D. ರೇವಣ್ಣ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಹೊಟ್ಟೆ ನೋವಿದ್ದರೂ ವಿಚಾರಣೆಗೆ ಸಹಕಾರ; ನ್ಯಾಯಾಧೀಶರ ಮುಂದೆ H D. ರೇವಣ್ಣ ಹೇಳಿಕೆ

ಲೈಂಗಿಕ ಕಿರುಕುಳದ ಸಂತ್ರಸ್ತೆ ಕಿಡ್ನಾಪ್ ಪ್ರಕರಣದಲ್ಲಿ ಎಸ್ಐಟಿಯಿಂದ ಬಂಧನಕ್ಕೊಳಗಾಗಿರುವ ಹೊಳೆನರಸೀಪುರ ಕ್ಷೇತ್ರದ ಶಾಸಕ ಎಚ್ ಡಿ ರೇವಣ್ಣ ಇಂದು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಆದರೆ ನ್ಯಾಯಾಲಯ ಅವರಿಗೆ ಮೇ 14ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ.

ಇಂದು ಜಾಮೀನು ಅರ್ಜಿ ವಿಚಾರಣೆ ನಡೆದ ವೇಳೆ ಎಸ್ಐಟಿ ಪರ ವಕೀಲರು ರೇವಣ್ಣ ಪತ್ರಿಕಾಗೋಷ್ಠಿ ನಡೆಸಿದ್ದರು ಎಂಬ ಆರೋಪ ಮಾಡಿದ್ದು, ಇದಕ್ಕೆ ನಿರಾಕರಿಸಿದ್ದ ರೇವಣ್ಣ ತಾನು ಅನಾರೋಗ್ಯದಿಂದ ಬಳಲುತ್ತಿರುವುದಾಗಿ ಹೇಳಿದರು.

ತೀವ್ರ ಹೊಟ್ಟೆ ನೋವಿದ್ದರೂ ಸಹ ನಾನು ಎಸ್ಐಟಿ ವಿಚಾರಣೆಗೆ ಸಹಕರಿಸಿದ್ದೇನೆ. ಮೂರು ದಿನಗಳಿಂದ ನಾನು ನಿದ್ರೆ ಮಾಡಿಲ್ಲ ಎಂದು ರೇವಣ್ಣನವರು ನ್ಯಾಯಾಧೀಶರ ಮುಂದೆ ಹೇಳಿದ್ದು ಅಂತಿಮವಾಗಿ ಅವರನ್ನು ಮೇ 14ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದೀಗ ಎಸ್ಐಟಿ ರೇವಣ್ಣ ಅವರನ್ನು ಪರಪ್ಪನ ಅಗ್ರಹಾರಕ್ಕೆ ಕರೆದೊಯ್ಯಲು ಸಿದ್ಧತೆ ನಡೆಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...