alex Certify ಬೆಂಕಿಯ ಜೊತೆ ಸಾಹಸ ಮಾಡಲು ಹೋಗಿ ಜೀವವನ್ನೇ ಕಳೆದುಕೊಂಡ ಭೂಪ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಕಿಯ ಜೊತೆ ಸಾಹಸ ಮಾಡಲು ಹೋಗಿ ಜೀವವನ್ನೇ ಕಳೆದುಕೊಂಡ ಭೂಪ….!

35 ವರ್ಷದ ವ್ಯಕ್ತಿಯೊಬ್ಬ ಮದ್ಯದ ಅಮಲಿನಲ್ಲಿ ಸಾಹಸ ಪ್ರದರ್ಶಿಸಲು ಹೋಗಿ ಜೀವವನ್ನೇ ಕಳೆದುಕೊಂಡ ಘಟನೆಯು ಭೂಪಾಲ್​ನಲ್ಲಿ ನಡೆದಿದೆ. ಮೊಬೈಲ್​ನಲ್ಲಿ ನೋಡಿದ್ದ ಬಾಯಿಯಿಂದ ಬೆಂಕಿ ಉಗುಳುವ ಸಾಹಸ ಮಾಡಲು ಹೋದ ವ್ಯಕ್ತಿಯೊಬ್ಬ ಸುಟ್ಟ ಗಾಯಗಳಿಂದ ಮೃತಪಟ್ಟಿದ್ದಾನೆ.

ಮೃತ ವ್ಯಕ್ತಿಯನ್ನು 35 ವರ್ಷದ ಗೋವಿಂದ್​ ಸಿಂಗ್ ಮೆಹ್ರಾ​ ಎಂದು ಗುರುತಿಸಲಾಗಿದೆ. ಮಾರ್ಚ್ 6ರಂದು ಮದ್ಯದ ಅಮಲಿನಲ್ಲಿದ್ದ ಗೋವಿಂದ್​ ಸಿಂಗ್​​ ಮೊಬೈಲ್​ನಲ್ಲಿ ವಿಡಿಯೋಗಳನ್ನು ವೀಕ್ಷಿಸುತ್ತಿದ್ದ ಎನ್ನಲಾಗಿದೆ.

ವಿಡಿಯೋವನ್ನು ವೀಕ್ಷಿಸುತ್ತಿದ್ದ ವೇಳೆಯಲ್ಲಿ ಓರ್ವ ವ್ಯಕ್ತಿ ಬೆಂಕಿಯನ್ನು ಉಗುಳುತ್ತಿರೋದನ್ನು ಗೋವಿಂದ್​ ಸಿಂಗ್​ ನೋಡಿದ್ದಾನೆ. ಆದರೆ ಅಮಲಿನಲ್ಲಿದ್ದ ಗೋವಿಂದ್​​ ಇದೇ ರೀತಿಯ ಸಾಹಸ ಮಾಡಲು ನಿರ್ಧರಿಸಿದ್ದಾನೆ. ಪೆಟ್ರೋಲ್​ ತಂದು ಅದನ್ನು ಬಾಯಿಯಲ್ಲಿ ಹಾಕಿಕೊಂಡು ಬೆಂಕಿಯ ಮುಂದೆ ಪೆಟ್ರೋಲ್​ ಉಗುಳಲು ಯತ್ನಿಸಿದನು.

ಆದರೆ ಪೆಟ್ರೋಲ್​ ಗೋವಿಂದ್​ ದೇಹದ ಮೇಲೆ ಚೆಲ್ಲಿತ್ತು. ಹೀಗಾಗಿ ಕೂಡಲೇ ಗೋವಿಂದ್​ ಬೆಂಕಿಯ ದಾಳಿಗೆ ತುತ್ತಾದನು. ಬೆಂಕಿಯಿಂದ ಪಾರಾಗಬೇಕೆಂದು ಗೋವಿಂದ್​ ಹತ್ತಿರದಲ್ಲೇ ಇದ್ದ ನಾಲೆಗೆ ಹಾರಿದ್ದಾನೆ. ಆದರೆ ಮೈ ತುಂಬಾ ಸುಟ್ಟ ಗಾಯಗಳಾಗಿದ್ದರಿಂದ ಆತ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...