alex Certify ಬಡವರಿಗೆ ಬಿಗ್ ಶಾಕ್: 5 ಕೆಜಿ ಉಚಿತ ಅಕ್ಕಿ ಸ್ಥಗಿತ, ರಾಜ್ಯದ ಪಾಲಿನ 5 ಕೆಜಿ ಮಾತ್ರ ವಿತರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಡವರಿಗೆ ಬಿಗ್ ಶಾಕ್: 5 ಕೆಜಿ ಉಚಿತ ಅಕ್ಕಿ ಸ್ಥಗಿತ, ರಾಜ್ಯದ ಪಾಲಿನ 5 ಕೆಜಿ ಮಾತ್ರ ವಿತರಣೆ

ಬೆಂಗಳೂರು: ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಗರೀಬ್ ಕಲ್ಯಾಣ್ ಯೋಜನೆಯಡಿ ಕೇಂದ್ರ ಸರ್ಕಾರ ನೀಡುತ್ತಿದ್ದ 5 ಕೆಜಿ ಉಚಿತ ಅಕ್ಕಿ ಈ ತಿಂಗಳೇ ಕೊನೆಯಾಗಲಿದೆ.

ಗರೀಬ್ ಕಲ್ಯಾಣ್ ಯೋಜನೆ ಸೆಪ್ಟೆಂಬರ್ 30 ಕ್ಕೆ ಅಂತ್ಯವಾಗುತ್ತಿದ್ದು, 5 ಕೆಜಿ ಉಚಿತ ಅಕ್ಕಿ ವಿತರಣೆ ನಿಲ್ಲಿಸಲಾಗುವುದು. ಅಕ್ಟೋಬರ್ ನಿಂದ ಪಡಿತರ ಚೀಟಿದಾರರಿಗೆ ರಾಜ್ಯದ ಪಾಲಿನ ತಲಾ 5 ಕೆಜಿ ಅಕ್ಕಿ ಮಾತ್ರ ನೀಡಲಾಗುವುದು ಎಂದು ಹೇಳಲಾಗಿದೆ.

ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಪಡಿತರ ಚೀಟಿದಾರರಿಗೆ ಪ್ರತಿ ಯೂನಿಟ್ ಗೆ 5 ಕೆಜಿ ಧಾನ್ಯ ಉಚಿತವಾಗಿ ನೀಡಲಾಗುತ್ತಿದೆ. ರಾಜ್ಯದ ಪಾಲು ಸೇರಿ ತಲಾ 10 ಕೆಜಿ ಧಾನ್ಯ ಸಿಗುತ್ತಿತ್ತು.

8 ಕೆಜಿ ಅಕ್ಕಿ, ಎರಡು ಕೆಜಿ ರಾಗಿ ಅಥವಾ ಗೋಧಿ ಪಡೆಯುತ್ತಿದ್ದ ಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರಿಗೆ ತಲಾ ಐದು ಕೆಜಿ ಅಕ್ಕಿ ಕಡಿತವಾಗಲಿದೆ. ಯೋಜನೆ ಮುಂದುವರಿಸಲು ಒತ್ತಾಯ ಕೇಳಿ ಬಂದಿದ್ದು, ಕೇಂದ್ರ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...