ಪೊಲೀಸ್ ಸಿಬ್ಬಂದಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ರಾಘವೇಂದ್ರ ಔರಾದ್ಕರ್ ವರದಿಯನ್ನು ಪೂರ್ಣವಾಗಿ ಅನುಷ್ಠಾನಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಭಾನುವಾರದಂದು ತುಮಕೂರಿನಲ್ಲಿ ನಡೆದ ವಿಜಯ ಕರ್ನಾಟಕ ಜನಸ್ನೇಹಿ ಪೊಲೀಸ್ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಈ ವಿಷಯ ಹೇಳಿದ್ದಾರೆ.
ಪೊಲೀಸರು ಸಂಕಷ್ಟದಲ್ಲಿದ್ದಾರೆ. ಅವರಿಗೆ ವೇತನ ಹೆಚ್ಚಳ, ಭತ್ಯೆ ಪರಿಷ್ಕರಣೆ, ಮನೆಗಳ ನವೀಕರಣ, ಸಮವಸ್ತ್ರ ನೀಡುವುದೂ ಸೇರಿದಂತೆ ಹಲವು ಶಿಫಾರಸ್ಸುಗಳನ್ನು ಔರಾದ್ಕರ್ ಸಮಿತಿ ಮಾಡಿದ್ದು, ಇವುಗಳ ಸಂಪೂರ್ಣ ಅನುಷ್ಠಾನಕ್ಕೆ ನಾವು ಬದ್ಧ ಎಂದು ಪರಮೇಶ್ವರ್ ವಾಗ್ದಾನ ಮಾಡಿದ್ದಾರೆ.