alex Certify ಪೊಲೀಸರ ವೇಷದಲ್ಲಿ ಬಂದು ಚಿನ್ನ, ನಗದು ದೋಚಿ ಎಸ್ಕೇಪ್ ಆದ ಕಳ್ಳರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸರ ವೇಷದಲ್ಲಿ ಬಂದು ಚಿನ್ನ, ನಗದು ದೋಚಿ ಎಸ್ಕೇಪ್ ಆದ ಕಳ್ಳರು

 

ಬೆಂಗಳೂರು: ಪೊಲೀಸರ ಸೋಗಿನಲ್ಲಿ ಮನೆಗೆ ನುಗ್ಗಿದ ಕಳ್ಳರ ಗುಂಪು ಮನೆಯಲ್ಲಿದ್ದ ಚಿನ್ನಾಭರಣ, ಹಣ ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಲ್ಲಿ ನಡೆದಿದೆ.

ಇಲ್ಲಿನ ವೆಂಕಟೇಶ್ ಎಂಬುವವರ ನಿವಾಸಕ್ಕೆ ತಿಪಟೂರು ಪೊಲೀಸರು ಎಂದು ಹೇಳಿಕೊಂಡು ಇಬ್ಬರು ಪೊಲೀಸರ ವೇಷದಲ್ಲಿ ಬಂದಿದ್ದು, ಓರ್ವ ಕಳ್ಳನೆಂದು ಕರೆತಂದಿದ್ದಾರೆ. ಕಳ್ಳತನದ ಮಾಲು ತಮಗೆ ಕೊಟ್ಟಿರುವುದಾಗಿ ಕಳ್ಳ ಬಾಯ್ಬಿಟ್ಟಿದ್ದು, ಚಿನ್ನಾಭರಣ, ಹಣ ತೋರಿಸುವಂತೆ ಹೇಳಿ ಮನೆಯಲ್ಲಿದ್ದ ಒಡವೆ, ಹಣ ವಶಪಡಿಸಿಕೊಂಡಿದ್ದಾರೆ.

ಪ್ರವಾಸಿಗರಿಂದ ತುಂಬಿದ್ದ ಮಹೀಂದ್ರಾ ಎಸ್‌ಯುವಿಯನ್ನು ಎಳೆದ ಹುಲಿ…..! ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರಾ

ಹೀಗೆ ಪಡೆದ ಹಣ, ಚಿನ್ನಾಭರಣಗಳನ್ನು ದೋಚಿ ಸ್ಥಳದಿಂದ ಪರಾರಿಯಾಗಿದ್ದಾರೆ. ಸುಮಾರು 600 ಗ್ರಾಂ ಚಿನ್ನಾಭರಣ ಕದ್ದು ಎಸ್ಕೇಪ್ ಆಗಿದ್ದಾಗಿ ವೆಂಕಟೇಶ್, ಮಹಾಲಕ್ಷ್ಮಿ ಲೇಔ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...