alex Certify ಪೆರೋಲ್​​ ಅವಧಿ ಮುಕ್ತಾಯ ಹಿನ್ನೆಲೆ ಜೈಲಿಗೆ ಮರಳಿದ ಸ್ವಯಂ ಘೋಷಿತ ದೇವಮಾನವ ಗುರ್ಮೀತ್​ ರಾಮ್​ ರಹೀಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೆರೋಲ್​​ ಅವಧಿ ಮುಕ್ತಾಯ ಹಿನ್ನೆಲೆ ಜೈಲಿಗೆ ಮರಳಿದ ಸ್ವಯಂ ಘೋಷಿತ ದೇವಮಾನವ ಗುರ್ಮೀತ್​ ರಾಮ್​ ರಹೀಂ

ಡೇರಾ ಸಚ್ಛಾ ಸೌಧದ ಮುಖ್ಯಸ್ಥ ಗುರ್ಮೀತ್​ ರಾಮ್​ ರಹೀಂ ಸಿಂಗ್​​ ಮೂರು ವಾರಗಳ ಪೆರೋಲ್​ ಅವಧಿಯು ಮುಗಿದ ಹಿನ್ನೆಲೆಯಲ್ಲಿ ಅವರನ್ನು ರೋಹ್ಟಕ್​​​ನ ಸುನಾರಿಯಾ ಜೈಲಿಗೆ ಕರೆತರಲಾಯಿತು.

ಸಿರ್ಸಾದಲ್ಲಿರುವ ತನ್ನ ಆಶ್ರಮದಲ್ಲಿ ಇಬ್ಬರು ಮಹಿಳಾ ಶಿಷ್ಯರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಅಡಿಯಲ್ಲಿ ಸ್ವಯಂಘೋಷಿತ ದೇವಮಾನವ ಗುರ್ಮೀತ್​ ರಾಮ್​ ರಹೀಂ ಸಿಂಗ್​​ 20 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. 2017ರ ಆಗಸ್ಟ್​​ ತಿಂಗಳಲ್ಲಿ ಪಂಚಕುಲದ ವಿಶೇಷ ಸಿಬಿಐ ನ್ಯಾಯಾಲಯವು ಗುರ್ಮೀತ್​​ ರಾಮ್​ ರಹೀಂ ಸಿಂಗ್​​ರನ್ನು ದೋಷಿ ಎಂದು ಘೋಷಿಸಿದೆ.

ಗುರ್ಮೀತ್​ ರಾಮ್​ ರಹೀಂ ಸಿಂಗ್​​ರನ್ನು ಗುರುಗ್ರಾಮದಿಂದ ರೋಹ್ಟಕ್​ ಜಿಲ್ಲೆಯ ಸುನಾರಿಯಾ ಜೈಲಿಗೆ ಭಾರೀ ಭದ್ರತೆಯಲ್ಲಿ ಕರೆತರಲಾಯಿತು ಎಂದು ರೋಹ್ಟಕ್​​ ಪೊಲೀಸ್​ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಗುರುಗ್ರಾಮದಲ್ಲಿ ಕುಟುಂಬಸ್ಥರನ್ನು ಭೇಟಿ ಮಾಡಲು ಫೆಬ್ರವರಿ 7ರಂದು ಗುರ್ಮೀತ್​ಗೆ ಮೂರು ವಾರಗಳ ಪೆರೋಲ್​ ನೀಡಲಾಗಿದೆ.

ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಡೇರಾ ಮುಖ್ಯಸ್ಥ ಗುರ್ಮೀತ್​ ರಾಮ್​ ರಹೀಂ ಸಿಂಗ್​​ ಜೀವಕ್ಕೆ ಬೆದರಿಕೆ ಇರುವ ಹಿನ್ನೆಲೆಯಲ್ಲಿ 21 ದಿನಗಳ ಪೆರೋಲ್​ ಅವಧಿಯಲ್ಲಿ Z- ಪ್ಲಸ್ ವರ್ಗದ ಭದ್ರತೆಯನ್ನು ಒದಗಿಸಲಾಗಿದೆ. ರಾಮ್​ ರಹೀಂ ಹಾರ್ಡ್​ಕೋರ್​ ಕೈದಿಗಳ ವರ್ಗಕ್ಕೆ ಬರುವುದಿಲ್ಲ ಎಂದು ಹರಿಯಾಣ ಸರ್ಕಾರ ತೀರ್ಮಾನಿಸಿದ ಹಿನ್ನೆಲೆಯಲ್ಲಿ ರಾಮ ರಹೀಮನನ್ನು ಬಿಡುಗಡೆ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...