alex Certify ಪವರ್ ಸ್ಟಾರ್ ಹೃದಯಾಘಾತದ ಬೆನ್ನಲ್ಲೇ ಆತಂಕಕ್ಕೀಡಾದ ಜನ; ಜಿಮ್ ಬಿಟ್ಟು ಆಸ್ಪತ್ರೆಗಳತ್ತ ಮುಖಮಾಡಿದ ಯುವಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪವರ್ ಸ್ಟಾರ್ ಹೃದಯಾಘಾತದ ಬೆನ್ನಲ್ಲೇ ಆತಂಕಕ್ಕೀಡಾದ ಜನ; ಜಿಮ್ ಬಿಟ್ಟು ಆಸ್ಪತ್ರೆಗಳತ್ತ ಮುಖಮಾಡಿದ ಯುವಕರು

ಬೆಂಗಳೂರು: ಯೂಥ್ ಐಕಾನ್ ಆಗಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನ ಯುವಜನತೆಯನ್ನು ಆಘಾತಕ್ಕೀಡು ಮಾಡಿದ್ದು, ಸಿಲಿಕಾನ್ ಸಿಟಿ ಜನರು ಬೆಚ್ಚಿಬಿದ್ದಿದ್ದಾರೆ.

ಫಿಟ್ ನೆಸ್, ಆರೋಗ್ಯದ ಬಗ್ಗೆ ಅತಿಯಾದ ಕಾಳಜಿ ವಹಿಸುತ್ತಿದ್ದ ಪವರ್ ಸ್ಟಾರ್ ಹೃದಯಾಘಾತದಿಂದ ವಿಧಿವಶರಾಗಿರುವುದು ಯುವಜನತೆಯನ್ನು ಇನ್ನಷ್ಟು ಆತಂಕಕ್ಕೀಡು ಮಾಡಿದೆ. ಈ ಹಿನ್ನೆಲೆಯಲ್ಲಿ ಹೃದಯ ಸಂಬಂಧಿ ಆಸ್ಪತ್ರೆಗಳಿಗೆ ದೌಡಾಯಿಸುತ್ತಿರುವ ಜನರ ಸಂಖ್ಯೆ ಬೆಂಗಳೂರಿನಲ್ಲಿ ಹೆಚ್ಚಿದೆ.

ಶಾಕಿಂಗ್​: ಶಮಿ ಪರ ನಿಂತ ವಿರಾಟ್​ ಕೊಹ್ಲಿ ಪುತ್ರಿಗೆ ಕಿಡಿಗೇಡಿಗಳಿಂದ ಅತ್ಯಾಚಾರದ ಬೆದರಿಕೆ…!

ನಟ ಪುನೀತ್ ರಾಜ್ ಕುಮಾರ್ ನಿಧನದ ಬಳಿಕ ಭಯಭೀತರಾಗಿರುವ ಸಿಲಿಕಾನ್ ಸಿಟಿ ಜನತೆ, ಆರೋಗ್ಯ ತಪಾಸಣೆಗಾಗಿ ಜಯದೇವ ಸೇರಿದಂತೆ ಹೃದಯ ಸಂಬಂಧಿ ಆಸ್ಪತ್ರೆಗಳಿಗೆ ಎಡತಾಕುತ್ತಿದ್ದಾರೆ. ಜಿಮ್, ಕಸರತ್ತು, ವ್ಯಾಯಾಮ ಮಾಡುತ್ತಿದ್ದ ಜನರು ಅತಿಯಾದ ವರ್ಕೌಟ್ ನಿಂದ ವಿಮುಖರಾಗುತ್ತಿದ್ದಾರೆ.

ಜಯದೇವ ಆಸ್ಪತ್ರೆಯ ಓಪಿಡಿಯಲ್ಲಿ ಚಿಕಿತ್ಸೆಗೆ ಬರುವ ರೋಗಿಗಳ ಸಂಖ್ಯೆ ದಿಢೀರ್ ಏರಿಕೆಯಾಗಿದೆ. ಯುವ ಜನತೆ ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದು, ಮುಂಜಾಗೃತಾ ಕ್ರಮಗಳತ್ತ ಯೋಚಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...