alex Certify ಪವನ್ ಕಲ್ಯಾಣ್ ಗಾಗಿ ಚಿರಂಜೀವಿ ಮಾಡಿದ್ದೇನು ಗೊತ್ತಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪವನ್ ಕಲ್ಯಾಣ್ ಗಾಗಿ ಚಿರಂಜೀವಿ ಮಾಡಿದ್ದೇನು ಗೊತ್ತಾ..?

ಹೈದರಾಬಾದ್: ಸಿನಿಮಾದ ಜೊತೆ ರಾಜಕಾರಣದಲ್ಲೂ ಮಿಂಚುತ್ತಿದ್ದ ಚಿರಂಜೀವಿ ಇದೀಗ ಸಕ್ರೀಯ ರಾಜಕಾರಣದಿಂದ ದೂರ ಸರಿದಿದ್ದಾರೆ. ತಮ್ಮನ ಜೊತೆ ಮುಂದಿನ ಚುನಾವಣೆಗೆ ರಾಜಕಾರಣದಲ್ಲಿ ಕಾಣಿಸಿಕೊಳ್ಳಲು ಇದೀಗ ರಾಜಕೀಯಕ್ಕೆ ಗುಡ್ ಬೈ ಹೇಳಿದ್ದಾರೆ ಎನ್ನಲಾಗಿದೆ.

ಹೈದರಾಬಾದ್‍ನಲ್ಲಿ ಚಲನಚಿತ್ರ ಸಭೆಯಲ್ಲಿ ಮಾತನಾಡಿರುವ ಚಿರಂಜೀವಿ, ಮುಂದೆ ಸಹೋದರನಿಗೆ ಸಹಾಯ ಮಾಡುವ ಉದ್ದೇಶ ಇದೆ. ಇಂಥ ನಾಯಕ ನಮಗೆ ಬೇಕಾಗಬಹುದು. ಮುಂಬರುವ ಚುನಾವಣೆಯಲ್ಲಿ ಸಹೋದರನ ಪಕ್ಷಕ್ಕೆ ಬೆಂಬಲ ನೀಡೋದಾಗಿ ಹಾಗೂ ಸಹಾಯ ಮಾಡೋದಾಗಿ ಹೇಳಿದ್ದಾರೆ.

ಇನ್ನು ಚಿರಂಜೀವಿ ಬಿಜೆಪಿಗೆ ಸಪೋರ್ಟ್ ಮಾಡ್ತಾರೆ ಅಂತ ಹೇಳಲಾಗಿತ್ತು. ಆದರೆ ಇದೀಗ ಸಕ್ರೀಯ ರಾಜಕಾರಣದಿಂದ ಹಿಂದೆ ಉಳಿಯುವ ನಿರ್ಧಾರ ಎಲ್ಲಾ ಊಹಾಪೋಹಕ್ಕೆ ತೆರೆ ಬಿದ್ದಂತಾಗಿದೆ. ಅಷ್ಟೆ ಅಲ್ಲ ಮುಂದೆ ಮತ್ತೆ ಇವರು ಸಕ್ರೀಯ ರಾಜಕಾರಣದಲ್ಲಿ ಭಾಗಿಯಾಗಲಿದ್ದಾರೆ ಅನ್ನೋದಂತೂ ಸ್ಪಷ್ಟ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...