alex Certify ‘ನನ್ನ ವಿರುದ್ಧ ಮಾತನಾಡಿ ಲೀಡರ್​ ಆಗೋಕೆ ಆಗಲ್ಲ, ನೀನೊಬ್ಬ ಲೂಟಿ ರವಿ’ – ಸಿ.ಟಿ. ರವಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಕಿಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ನನ್ನ ವಿರುದ್ಧ ಮಾತನಾಡಿ ಲೀಡರ್​ ಆಗೋಕೆ ಆಗಲ್ಲ, ನೀನೊಬ್ಬ ಲೂಟಿ ರವಿ’ – ಸಿ.ಟಿ. ರವಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಕಿಡಿ

ಭ್ರಷ್ಟಾಚಾರ ಜನಕ ಕಾಂಗ್ರೆಸ್​ ಎಂಬ ಸಿ.ಟಿ. ರವಿ ಹೇಳಿಕೆಗೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​, ಸಿ.ಟಿ. ರವಿ ಒಬ್ಬ ಲೂಟಿ ರವಿ ಎಂದು ಕಿಡಿಕಾರಿದ್ದಾರೆ. ನೀನು ಏನು ನನ್ನ ವಿರುದ್ಧ ಆರೋಪ ಮಾಡೋದು ಅಂತಾ ಪ್ರಶ್ನೆ ಮಾಡಿದರು.

ಈ ಲೂಟಿ ರವಿ ನನ್ನ ವಿರುದ್ಧ ಮಾತನಾಡಿ ದೊಡ್ಡ ಲೀಡರ್​ ಆಗಬೇಕು ಎಂದುಕೊಂಡಿದ್ದಾರೆ. ಈ ಸಿ.ಟಿ. ರವಿ ಲೂಟಿ ರವಿ ಹೇಗಿದ್ದ ಅನ್ನೋದನ್ನು ಮೊದಲು ಹೇಳಲಿ ಎಂದು ಗುಡುಗಿದರು.

ಚಳಿಗಾಲ ಅಧಿವೇಶನಕ್ಕೂ ಮುನ್ನ ಬೆಳಗಾವಿಯ ಸುವರ್ಣ ಸೌಧದ ಎದುರು ಕಾಂಗ್ರೆಸ್​ ಹೈಡ್ರಾಮಾವನ್ನೇ ನಡೆಸಿದೆ. ಪರ್ಸೆಂಟೇಜ್​ ಸರ್ಕಾರ ಎಂದು ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದ ಕಾಂಗ್ರೆಸ್​ ನಾಯಕರು ಟ್ರ್ಯಾಕ್ಟರ್​ ರ್ಯಾಲಿ ನಡೆಸುವ ಮೂಲಕ ಆಕ್ರೋಶ ಹೊರಹಾಕಿದರು.

ಟ್ರ್ಯಾಕ್ಟರ್​ ಸುವರ್ಣ ಸೌಧ ಪ್ರವೇಶಿಸಲು ಪೊಲೀಸರು ಅನುಮತಿ ನಿರಾಕರಿಸುತ್ತಿದ್ದಂತೆಯೇ ಆಕ್ರೋಶ ವಿಕೋಪಕ್ಕೆ ತಿರುಗಿತ್ತು. ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಕರೆ ಮಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ರ್ಯಾಕ್ಟರ್​ ಸಮೇತ ಸುವರ್ಣಸೌಧಕ್ಕೆ ತೆರಳಲು ಅನುಮತಿ ಪಡೆದುಕೊಂಡರು. ಸುಮಾರು ಒಂದೂವರೆ ಗಂಟೆಯ ಹೈಡ್ರಾಮಾದ ಬಳಿಕ ಕಾಂಗ್ರೆಸ್​ ನಾಯಕರು ಸುವರ್ಣ ಸೌಧದ ಒಳಗೆ ಎಂಟ್ರಿ ನೀಡಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...