alex Certify ನಟ ರಾಮ್​ಚರಣ್​ ಕಾರಿಗೆ ಮುತ್ತಿಗೆ ಹಾಕಿದ ಅಭಿಮಾನಿಗಳು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟ ರಾಮ್​ಚರಣ್​ ಕಾರಿಗೆ ಮುತ್ತಿಗೆ ಹಾಕಿದ ಅಭಿಮಾನಿಗಳು….!

ತಮ್ಮ ಮುಂಬರುವ ಸಿನಿಮಾ RC15ರ ಶೂಟಿಂಗ್​ನಲ್ಲಿ ಬ್ಯುಸಿ ಇರುವ ನಟ ರಾಮ್​ ಚರಣ್​ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಲು ಆಂಧ್ರಪ್ರದೇಶದ ರಾಜಮುಂಡ್ರಿಗೆ ತೆರಳಿದ್ದಾರೆ. ರಾಮ್​ಚರಣ್​ ರಾಜಮುಂಡ್ರಿಗೆ ಬಂದಿಳಿಯುತ್ತಿದ್ದಂತೆಯೇ ಅಭಿಮಾನಿಗಳು ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಮುಗಿಬಿದ್ದಿದದ್ದಾರೆ.

ನಟ ಹೋಟೆಲ್​ಗೆ ತೆರಳುವ ಮಾರ್ಗ ಮಧ್ಯದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಜಮಾಯಿಸಿದ ಅಭಿಮಾನಿಗಳು ರಾಮ್​ಚರಣ್​ ಕ್ರೇಜ್​ ಏನು ಅನ್ನೋದನ್ನ ತೋರಿಸಿದ್ದಾರೆ. ಆರ್​ಸಿ 15 ಸಿನಿಮಾಗೆ ಶಂಕರ್​ ಆ್ಯಕ್ಷನ್​ ಕಟ್​ ಹೇಳಿದ್ದು ಕಾರ್ತಿಕ್​ ಸುಬ್ಬರಾಜ್​ ಈ ಸಿನಿಮಾಗೆ ಕತೆ ಹೆಣೆದಿದ್ದಾರೆ.

ರಾಮ್ ಚರಣ್ ತಮ್ಮ ಮುಂಬರುವ ಚಿತ್ರ RRR ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಎಸ್ ಎಸ್ ರಾಜಮೌಳಿ ನಿರ್ದೇಶನದ ಈ ಚಿತ್ರವು ಮಾರ್ಚ್ 25 ರಂದು ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ತೆಲುಗು ಅಲ್ಲದೆ, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿಯಲ್ಲೂ ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಭಾನುವಾರ ರಾಮ್ ಚರಣ್ ಮತ್ತು ಅವರ ತಂಡವು ಆರ್‌ಸಿ 15 ರ ಶೂಟಿಂಗ್‌ಗಾಗಿ ರಾಜಮಂಡ್ರಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ರಾಮ್​ ಚರಣ್ ದರ್ಶನ ಪಡೆಯಲು ಅವರ ಅಭಿಮಾನಿಗಳು ವಿಮಾನ ನಿಲ್ದಾಣದ ಹೊರಗೆ ಕಾಯುತ್ತಿದ್ದರು. ಅವರ ಅಭಿಮಾನಿಗಳು ಅವರನ್ನು ಗುಂಪುಗೂಡಿಸಿದರು ಮತ್ತು ಬೌನ್ಸರ್‌ಗಳು ರಾಮ್​ ಚರಣ್​ ಕಾರಿಗೆ ಮಾರ್ಗ ಮಾಡಿಕೊಡಲು ಹರಸಾಹಸ ಪಟ್ಟಿದ್ದಾರೆ.

— Haricharan Pudipeddi (@pudiharicharan) February 14, 2022

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...