alex Certify ‘ಧನುರ್ಮಾಸ’ದಲ್ಲಿ ಸ್ನಾನ ಮಾಡುವ ನೀರಿಗೆ ಇದನ್ನು ಬೆರೆಸಿದರೆ ಸಿಗುತ್ತೆ ದೈವಬಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಧನುರ್ಮಾಸ’ದಲ್ಲಿ ಸ್ನಾನ ಮಾಡುವ ನೀರಿಗೆ ಇದನ್ನು ಬೆರೆಸಿದರೆ ಸಿಗುತ್ತೆ ದೈವಬಲ

ಡಿ16ರಿಂದ ಧನುರ್ಮಾಸ ಪ್ರಾರಂಭವಾಗಿದೆ. ಈ ಮಾಸದಲ್ಲಿ ವಿಷ್ಣುವನ್ನು ಪೂಜಿಸಲಾಗುತ್ತದೆ. ಈ ಮಾಸದಲ್ಲಿ ವಿಷ್ಣುವಿನ ಅನುಗ್ರಹ ಪಡೆದರೆ ನಿಮ್ಮ ಕಷ್ಟಕಾರ್ಪಣ್ಯಗಳು ದೂರವಾಗಿ ಸುಖ ಜೀವನ ನಿಮ್ಮದಾಗುತ್ತದೆ. ಹಾಗಾಗಿ ವಿಷ್ಣುವಿನ ಅನುಗ್ರಹ ಪಡೆಯಲು ಈ ಮಾಸದಲ್ಲಿ ಪ್ರತಿದಿನ ಸ್ನಾನ ಮಾಡುವ ನೀರಿಗೆ ಈ ವಸ್ತುವನ್ನು ಬೆರೆಸಿ.

ನೀವು ಪ್ರತಿದಿನ ಸ್ನಾನ ಮಾಡುವ ನೀರಿಗೆ ತುಳಸಿ ಗಿಡದ ಬುಡದಲ್ಲಿರುವ ಒಂದು ಚಿಟಿಕೆ ಮಣ್ಣನ್ನು ಬೆರೆಸಿ ಸ್ನಾನ ಮಾಡಿ. ಇದರಿಂದ ನಿಮ್ಮ ಪಾಪಕರ್ಮಗಳು ನಿವಾರಣೆಯಾಗುತ್ತದೆ. ಮಹಾವಿಷ್ಣುವಿನ ಅನುಗ್ರಹ ಸಿಗುತ್ತದೆ. ಒಂದು ವೇಳೆ ಈ ಮಣ್ಣು ಸಿಗದಿದ್ದರೆ, ಸ್ನಾನ ಮಾಡುವಾಗ ಮೂರು ಬಾರಿ ಗಂಗಾ ಮಾತೆಯನ್ನು ನೆನೆಯಬೇಕು.

ಹಾಗೇ ದೇವರಿಗೆ ದೀಪವನ್ನು ಬೆಳಗಿ ಪೂಜೆ ಮಾಡುವಾಗ ವಿಷ್ಣು ಸಹಸ್ರನಾಮ ಪಠಿಸಿ. ಇದರಿಂದ ನಿಮಗಿರುವ ದೋಷ ನಿವಾರಣೆಯಾಗಿ ದೈವಬಲ ಹೆಚ್ಚಾಗುತ್ತದೆ. ಸರ್ವ ರಂಗದಲ್ಲೂ ಯಶಸ್ಸು ಸಿಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...