alex Certify ದೇವಸ್ಥಾನದ ಒಳಗೆ ನನ್ನನ್ನೂ ಬಿಡುವುದಿಲ್ಲ; ಅಸ್ಪೃಶ್ಯತೆಯ ಕಹಿ ಅನುಭವ ಬಿಚ್ಚಿಟ್ಟ ಡಾ. ಜಿ. ಪರಮೇಶ್ವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇವಸ್ಥಾನದ ಒಳಗೆ ನನ್ನನ್ನೂ ಬಿಡುವುದಿಲ್ಲ; ಅಸ್ಪೃಶ್ಯತೆಯ ಕಹಿ ಅನುಭವ ಬಿಚ್ಚಿಟ್ಟ ಡಾ. ಜಿ. ಪರಮೇಶ್ವರ

ಅಸ್ಪೃಶ್ಯತೆ ಇನ್ನೂ ಸಹ ಜಾರಿಯಲ್ಲಿದ್ದು, ರಾಜ್ಯದ ಹಿರಿಯ ರಾಜಕಾರಣಿಯಾಗಿರುವ ನನಗೇ ಇಂದಿಗೂ ದೇವಸ್ಥಾನದ ಒಳಗೆ ಬಿಟ್ಟುಕೊಳ್ಳುವುದಿಲ್ಲ. ದೇವಸ್ಥಾನದ ಒಳಗೆ ಹೋಗಿಬಿಡುತ್ತೇನೆ ಎಂಬ ಆತಂಕದಿಂದ ನಾನಿರುವ ಸ್ಥಳಕ್ಕೆ ಮಂಗಳಾರತಿ ತಟ್ಟೆ ತೆಗೆದುಕೊಂಡು ಬರುತ್ತಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತುಮಕೂರು ಜಿಲ್ಲೆ ಕೊರಟಗೆರೆಯಲ್ಲಿ ಡಾ. ಬಿ.ಆರ್.‌ ಅಂಬೇಡ್ಕರ್‌, ಬಾಬು ಜಗಜೀವನರಾಂ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಪಿ.ಹೆಚ್‌.ಡಿ. ಓದಿಕೊಂಡಿದ್ದೇನೆ. ವಿದೇಶದಲ್ಲೂ ವ್ಯಾಸಂಗ ಮಾಡಿದ್ದೇನೆ. ಸಚಿವನಾಗಿ ಕೆಲಸ ಮಾಡಿದ್ದೇನೆ. ಆದರೂ ನಾನು ದೇವಸ್ಥಾನಗಳಿಗೆ ಹೋದರೆ ಸ್ವಲ್ಪ ನಿಲ್ಲಿ ಮಂಗಳಾರತಿ ತಟ್ಟೆ ತರುತ್ತೇನೆ ಎಂದು ಹೇಳುತ್ತಾರೆಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಇಲ್ಲಿರುವಷ್ಟು ಜಾತಿ ವ್ಯವಸ್ಥೆ ಪ್ರಪಂಚದ ಇನ್ಯಾವ ಭಾಗದಲ್ಲೂ ಇಲ್ಲ ಎಂದು ಹೇಳಿದ ಡಾ. ಜಿ. ಪರಮೇಶ್ವರ, ಇದನ್ನು ಪ್ರಶ್ನಿಸಿದರೆ ಇದು ಭಾರತದ ಸಂಸ್ಕೃತಿ ಎನ್ನುತ್ತಾರೆ. ಜೊತೆಗೆ ಹುಟ್ಟಿದವರನ್ನೇ ಜಾತಿ ಕಾರಣಕ್ಕೆ ಕೀಳಾಗಿ ಕಂಡರೆ ಅದು ಯಾವ ಸಂಸ್ಕೃತಿ ಎಂದು ಕೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...