alex Certify ದಂಪತಿಯನ್ನು ಮನಬಂದಂತೆ ಥಳಿಸಿದ್ರಾ ಶಾಸಕರು…..? ವೀರಣ್ಣ ಚರಂತಿಮಠ್ ವಿರುದ್ಧ ಗಂಭೀರ ಆರೋಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಂಪತಿಯನ್ನು ಮನಬಂದಂತೆ ಥಳಿಸಿದ್ರಾ ಶಾಸಕರು…..? ವೀರಣ್ಣ ಚರಂತಿಮಠ್ ವಿರುದ್ಧ ಗಂಭೀರ ಆರೋಪ

ಬಾಗಲಕೋಟೆ: ಬಿಜೆಪಿ ಶಾಸಕ ವೀರಣ್ಣಚರಂತಿಮಠ ವಿರುದ್ಧ ದಂಪತಿಗಳು ಗಂಭೀರ ಆರೋಪ ಮಾಡಿದ್ದು, ಆಸ್ತಿ ಬರೆದುಕೊಡುವಂತೆ ಶಾಸಕರು ತಮ್ಮ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎಂದು ಕಣ್ಣೀರಿಟ್ಟಿದ್ದಾರೆ.

ಬಾಗಲಕೋಟೆ ಶಾಸಕ ವಿರಣ್ಣಚರಂತಿಮಠ ಗದಗದ ಸೋಮಾಪುರ ಮೂಲದ ಲಕ್ಷ್ಮಿ ಹಾಗೂ ಮಲ್ಲಯ್ಯ ದಂಪತಿ ಮೇಲೆ ಹಲ್ಲೆ ನಡೆಸಿದ್ದು, ಕಿವಿ ಹಾಗೂ ಕೈಗೆ ಬಾಸುಂಡೆ ಬರುವಂತೆ ಥಳಿಸಿದ್ದಾರೆ ಎನ್ನಲಾಗಿದೆ.

ಸಾಲ ಮರುಪಾವತಿಗೆ ನೀಡಿದ್ದ ಸಮಯ ಮುಗಿದರೂ ಸಾಲ ಮರುಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ ಗೆಸ್ಟ್ ಹೌಸ್ ಗೆ ಕರೆದ ಶಾಸಕರು ಆಸ್ತಿ ಪತ್ರವನ್ನು ಬರೆದುಕೊಡುವಂತೆ ಹೇಳಿದ್ದಾರೆ. ಇದಕ್ಕೆ ಮಲ್ಲಯ್ಯ ಹಾಗೂ ಲಕ್ಷ್ಮಿ ದಂಪತಿ ಒಪ್ಪದಿದ್ದಾಗ ಶಾಸಕರು ಮಹಿಳೆಯ ಮೇಲೆ ಖುರ್ಚಿ ಎತ್ತಿ ಬಿಸಾಕಿದ್ದಾರೆ. ಮತ್ತೊಂದೆಡೆ ಮಲ್ಲಯ್ಯನನ್ನು ಮನ ಬಂದಂತೆ ಥಳಿಸಿದ್ದಾರೆ. ದಂಪತಿಯಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಶಾಸಕರ ದರ್ಪಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...