alex Certify ತಂಗಿಯನ್ನು ಪ್ರೀತಿಸಿದ ಸ್ನೇಹಿತ; ಗೆಳೆಯನನ್ನೇ ಹತ್ಯೆಗೈದ ಅಣ್ಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಂಗಿಯನ್ನು ಪ್ರೀತಿಸಿದ ಸ್ನೇಹಿತ; ಗೆಳೆಯನನ್ನೇ ಹತ್ಯೆಗೈದ ಅಣ್ಣ

ಕಲಬುರ್ಗಿ: ತಂಗಿಯನ್ನು ಪ್ರೀತಿಸಿದ ಕಾರಣಕ್ಕೆ ಸ್ನೇಹಿತನನ್ನೇ ಅಣ್ಣನೊಬ್ಬ ಬೀಕರವಾಗಿ ಹತ್ಯೆ ಗೈದಿರುವ ಘಟನೆ ಕಲಬುರ್ಗಿ ಹೊರವಲಯದ ಕಾಳನೂರ್ ಡಾಬಾ ಬಳಿ ಬೆಳಕಿಗೆ ಬಂದಿದೆ.

21 ವರ್ಷದ ಆಕಾಶ್ ಕೊಲೆಯಾದ ಯುವಕ. ಓಂ ನಗರ ಕಾಲೋನಿಯ ಗ್ಯಾರೇಜ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಆಕಾಶ್ ತನ್ನ ಸ್ನೇಹಿತ ಶ್ರೀನಿಧಿ ಎಂಬಾತನ ತಂಗಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ.

ಕೆಲದಿನಗಳ ಹಿಂದೆ ಶ್ರೀನಿಧಿಯ ತಂಗಿಯೊಂದಿಗೆ ಆಕಾಶ್ ನಾಪತ್ತೆಯಾಗಿದ್ದ. ಇದೇ ವಿಚಾರವಾಗಿ ಇಬ್ಬರು ಸ್ನೇಹಿತರ ನಡುವೆ ಮನಸ್ತಾಪ ಆರಂಭವಾಗಿದೆ. ವಾಪಸ್ ಊರಿಗೆ ಬಂದಿದ್ದ ಆಕಾಶ್ ನನ್ನು ಹೊರಗೆ ಹೋಗಿ ಬರೋಣವೆಂದು ಕರೆದುಕೊಂಡು ಹೋಗಿದ್ದ ಶ್ರೀನಿಧಿ ಪಕ್ಕಾ ಪ್ಲಾನ್ ಮಾಡಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.

ಕಲಬುರ್ಗಿ ವಿವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...