alex Certify ಚಳಿಯಿಂದ ತತ್ತರಿಸಿರುವವರಿಗೆ ಮತ್ತಷ್ಟು ಮೈ ನಡುಗಿಸುತ್ತೆ ಈ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಳಿಯಿಂದ ತತ್ತರಿಸಿರುವವರಿಗೆ ಮತ್ತಷ್ಟು ಮೈ ನಡುಗಿಸುತ್ತೆ ಈ ಸುದ್ದಿ

ರಾಜ್ಯಾದ್ಯಂತ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ತೀವ್ರತರದ ಚಳಿ ಜನರನ್ನು ತತ್ತರಿಸುವಂತೆ ಮಾಡಿದೆ. ನಿತ್ಯ ವಾಕಿಂಗ್ ಹೋಗುತ್ತಿದ್ದವರು ಅದನ್ನು ಕೈ ಬಿಡುವಂತಾಗಿದ್ದು, ಆದರೆ ಪತ್ರಿಕೆ ವಿತರಕರು, ಹಾಲು ವಿತರಿಸುವವರು ಮೊದಲಾದ ಕೆಲಸದಲ್ಲಿರುವವರಿಗೆ ಈ ಚಳಿ ಇನ್ನಿಲ್ಲದಂತೆ ಕಾಡುತ್ತಿದೆ.

ಇದರ ಮಧ್ಯೆ ರಾಜ್ಯದಲ್ಲಿ ಇನ್ನೂ ಒಂದು ವಾರಗಳ ಕಾಲ ಚಳಿ ಮುಂದುವರಿಯಲಿದೆ ಎನ್ನಲಾಗಿದ್ದು, ಜನರನ್ನು ಮತ್ತಷ್ಟು ಮೈ ನಡುಗುವಂತೆ ಮಾಡಿದೆ. ಹಲವು ಜಿಲ್ಲೆಗಳಲ್ಲಿ ತಾಪಮಾನ ಹತ್ತು ಡಿಗ್ರಿ ಗಳಿಗಿಂತಲೂ ಕಡಿಮೆಯಿದ್ದು, ಜನ ಹೊರಬರಲು ಹಿಂದೇಟು ಹಾಕುವಂತಾಗಿದೆ.

ಚಳಿಯಿಂದ ರಕ್ಷಿಸಿಕೊಳ್ಳಲು ಸಾರ್ವಜನಿಕರು ಟೋಪಿ, ಸ್ವೆಟರ್, ಜಾಕೆಟ್ ಮೊದಲಾದವುಗಳ ಮೊರೆ ಹೋಗಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಜನ ಬೆಂಕಿ ಹಾಕಿಕೊಂಡು ಚಳಿ ಕಾಯಿಸಿಕೊಳ್ಳುತ್ತಿದ್ದಾರೆ. ಸಂಕ್ರಾಂತಿ ಬಳಿಕ ಚಳಿ ಕಡಿಮೆಯಾಗಬೇಕಿತ್ತಾದರೂ ಇನ್ನೂ ವಾರಗಳ ಕಾಲ ಮುಂದುವರಿಯಲಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...