alex Certify ಚಂದ್ರು ಹತ್ಯೆ ಪ್ರಕರಣ: ಕಮೀಷನರ್ ಕಮಲ್ ಪಂತ್ ಸುಳ್ಳು ಹೇಳಿದ್ದಾರೆ; BJP ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಭೀರ ಆರೋಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಂದ್ರು ಹತ್ಯೆ ಪ್ರಕರಣ: ಕಮೀಷನರ್ ಕಮಲ್ ಪಂತ್ ಸುಳ್ಳು ಹೇಳಿದ್ದಾರೆ; BJP ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಭೀರ ಆರೋಪ

ಬೆಂಗಳೂರು: ಜೆ.ಜೆ.ನಗರದಲ್ಲಿ ನಡೆದ ಯುವಕನ ಹತ್ಯೆ ಪ್ರಕರಣದ ಬಗ್ಗೆ ಪೊಲೀಸ್ ಕಮೀಷನರ್ ಸುಳ್ಳು ಹೇಳಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ರವಿಕುಮಾರ್, ಜೆ.ಜೆ.‌ ನಗರದಲ್ಲಿ ಚಂದ್ರು ಎಂಬ ಯುವಕನ ಹತ್ಯೆ ಪ್ರಕರಣ ವಿಚಾರವಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ಉರ್ದು ಭಾಷೆ ಬರಲಿಲ್ಲ ಎಂಬ ಕಾರಣಕ್ಕೆ ಹತ್ಯೆ ಮಾಡಲಾಗಿದೆ ಎಂಬುದು ನಿಜ ಎಂದಿದ್ದಾರೆ.

ನೀರಾವರಿ ಅಧಿಕಾರಿಗಳಂತೆ ಪೋಸ್​ ಕೊಟ್ಟು 500 ಟನ್​ ತೂಕದ ಸೇತುವೆಯನ್ನೇ ಕದ್ದ ಕಳ್ಳರು..!

ಚಂದ್ರು ಹತ್ಯೆ ಪ್ರಕರಣದ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿರುವುದು ಸುಳ್ಳು. ಚಂದ್ರು ಸ್ನೇಹಿತ ಸೈಮನ್ ಹಾಗೂ ಚಂದ್ರು ತಾಯಿ, ಆತನ ಅಕ್ಕಪಕ್ಕದ ಮನೆಯವರು ಕೂಡ ಉರ್ದು ಭಾಷೆ ಬರಲ್ಲ ಎಂಬ ಕಾರಣಕ್ಕೆ ಹತ್ಯೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಘಟನಾ ಸ್ಥಳದಲ್ಲಿ ಚಂದ್ರು ಜತೆಗಿದ್ದ ಸ್ನೇಹಿತನೇ ಹೇಳಿದ್ದು ಸುಳ್ಳಾಗಲು ಸಾಧ್ಯವಿಲ್ಲ. ಇದಕ್ಕಿಂತ ಹೆಚ್ಚಿನ ಸಾಕ್ಷಿ ಬೇಕೆ ? ಎಂದು ಪ್ರಶ್ನಿಸಿದ್ದಾರೆ.

ಚಂದ್ರು ಹತ್ಯೆ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಯಬೇಕು. ಭಾಷೆ ವಿಚಾರವಾಗಿಯೇ ಹತ್ಯೆ ನಡೆದಿದೆ ಎಂದು ರವಿಕುಮಾರ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...