alex Certify ಗರ್ಭಿಣಿಯರು ತನ್ನ ದೇಶಕ್ಕೆ ಬರುವಂತೆ ನಿತ್ಯಾನಂದ ಆಹ್ವಾನ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಿಣಿಯರು ತನ್ನ ದೇಶಕ್ಕೆ ಬರುವಂತೆ ನಿತ್ಯಾನಂದ ಆಹ್ವಾನ..!

ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದ ಸ್ವಾಮಿ ಇದೀಗ ತನ್ನದೇ ಆದ ದೇಶವೊಂದನ್ನು ನಿರ್ಮಿಸಿಕೊಂಡು ಅದಕ್ಕೆ ಕೈಲಾಸ ಎಂದು ಹೆಸರಿಟ್ಟು ಅಲ್ಲಿಯೇ ಜೀವಿಸುತ್ತಿದ್ದಾನೆ. ಆ ದೇಶದಲ್ಲಿ ಎಲ್ಲಾ ವ್ಯವಸ್ಥೆಯನ್ನು ನಿತ್ಯಾನಂದ ಮಾಡಿಕೊಂಡಿದ್ದಾನೆ. ಇದೀಗ ಹೊಸದೊಂದು ಆಹ್ವಾನವನ್ನು ನಿತ್ಯಾನಂದ ಗರ್ಭಿಣಿಯರಿಗೆ ನೀಡಿದ್ದಾನೆ.

ಹೌದು, ಈ ಕುರಿತಂತೆ ಒಂದು ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಪ್ರಕಾರ, ಗರ್ಭಿಣಿಯರು ನಮ್ಮ ದೇಶಕ್ಕೆ ಹೆರಿಗೆಗೆ ಬನ್ನಿ ಎಂದು ಹೇಳಿದ್ದಾನೆ. ಕೈಲಾಸದಲ್ಲಿ ಹೆರಿಗೆಯಾಗುವ ಪ್ರತಿ ಮಗುವಿಗೆ ವಿಶೇಷ ಗಿಫ್ಟ್ ನೀಡಲು ಮುಂದಾಗಿದ್ದಾನೆ. ಆ ಮಗುವಿಗೆ ವಿಶೇಷವಾದ ಅಲೌಕಿಕವಾದ ಪ್ರಕಾಶಮಾನವ ಶಕ್ತಿಯುಳ್ಳ ಡಿಎನ್‍ಎ ನೀಡುವುದಾಗಿ ತಿಳಿಸಿದ್ದಾನೆ ನಿತ್ಯಾನಂದ.

ಇನ್ನು ಕೈಲಾಸದಲ್ಲಿ ಇಡೀ ಬ್ರಹ್ಮಾಂಡಕ್ಕಾಗಿಯೇ ಮೀಸಲಾಗಿರುವ ಶಾಶ್ವತ ಕಾಸ್ಮಿಕ್ ಏರ್‌ಪೋರ್ಟ್‌ ಹಾಗೂ ಹೆರಿಗೆ ಆಸ್ಪತ್ರೆಯನ್ನು ಸದ್ಯದಲ್ಲೇ ನಿರ್ಮಿಸಲಾಗುತ್ತದೆಯಂತೆ. ಹೀಗಾಗಿ ಹೆರಿಗೆಗೆ ಬರಬಹುದು ಎಂದಿದ್ದಾನೆ. ಇದರ ಜೊತೆಗೆ ಅಲ್ಲಿ ಹುಟ್ಟುವ ಮಗುವಿಗೆ ಒಂದಿಷ್ಟು ಪ್ರಯೋಜನ ಇವೆ ಎಂದೂ ಹೇಳಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...