alex Certify ಗದಗದಲ್ಲಿ ಹೃದಯ ವಿದ್ರಾವಕ ಘಟನೆ: ನದಿ ಬಳಿ ದುಡುಕಿನ ನಿರ್ಧಾರ, ಮೂವರು ಮಕ್ಕಳೊಂದಿಗೆ ಹಾರಿದ ತಾಯಿ, ಇಬ್ಬರ ಸಾವು – ಮತ್ತಿಬ್ಬರು ಪಾರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗದಗದಲ್ಲಿ ಹೃದಯ ವಿದ್ರಾವಕ ಘಟನೆ: ನದಿ ಬಳಿ ದುಡುಕಿನ ನಿರ್ಧಾರ, ಮೂವರು ಮಕ್ಕಳೊಂದಿಗೆ ಹಾರಿದ ತಾಯಿ, ಇಬ್ಬರ ಸಾವು – ಮತ್ತಿಬ್ಬರು ಪಾರು

ಮೂವರು ಮಕ್ಕಳೊಂದಿಗೆ ನದಿಗೆ ಹಾರಿ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. 8 ವರ್ಷದ ಹೆಣ್ಣು ಮಗು ಮತ್ತು ತಾಯಿ ಉಮಾದೇವಿ(45) ಸಾವನ್ನಪ್ಪಿದ್ದಾರೆ. ತಾಯಿ ಕೈಯಿಂದ ತಪ್ಪಿಸಿಕೊಂಡು ಇಬ್ಬರು ಮಕ್ಕಳು ಪಾರಾಗಿದ್ದಾರೆ. 12, 14 ವರ್ಷದ ಮಕ್ಕಳು ಪಾರಾಗಿದ್ದಾರೆ. ಹೊಳೆಆಲೂರು ಬಳಿ ಹೃದಯ ವಿದ್ರಾವಕ ಘಟನೆ ನಡೆದಿದೆ.

ಗದಗ ಜಿಲ್ಲೆ ರೋಣ ತಾಲ್ಲೂಕಿನ ಹೊಳೆ ಆಲೂರು ಗ್ರಾಮದಲ್ಲಿ ಘಟನೆ ನಡೆದಿದೆ. 3 ತಿಂಗಳ ಹಿಂದೆ ಕೋವಿಡ್ ನಿಂದ ಉಮಾದೇವಿ ಪತಿ ಮೃತಪಟ್ಟಿದ್ದರು. ಸುಮಾರು 20 ಲಕ್ಷ ರೂ. ಸಾಲದ ಹೊರೆ ಕೂಡ ಇತ್ತು. ಇದರಿಂದ ಬೇಸತ್ತು ಉಮಾದೇವಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...