alex Certify ಕೇಂದ್ರ ಸರ್ಕಾರದ ಬಗ್ಗೆ ವಿವಾದಾತ್ಮಕ ಸಾಹಿತ್ಯಕ್ಕಾಗಿ ನಟ ಕಮಲ್ ಹಾಸನ್ ವಿರುದ್ಧ ದೂರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇಂದ್ರ ಸರ್ಕಾರದ ಬಗ್ಗೆ ವಿವಾದಾತ್ಮಕ ಸಾಹಿತ್ಯಕ್ಕಾಗಿ ನಟ ಕಮಲ್ ಹಾಸನ್ ವಿರುದ್ಧ ದೂರು

ನಟ ಕಮಲ್ ಹಾಸನ್ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಾತಾಳ ಪಾತಾಳ ಹಾಡಿಗೆ ತಮಿಳು ಸ್ಟಾರ್ ವಿರುದ್ಧ ದೂರು ದಾಖಲಾಗಿದೆ.

ಸಿನಿಮಾವೊಂದರ ಹಾಡಿನ ಸಾಹಿತ್ಯವು ಕೇಂದ್ರ ಸರ್ಕಾರವನ್ನು ಅಣಕಿಸುತ್ತದೆ ಎಂದು ಆರೋಪಿಸಲಾಗಿದ್ದು, ನಟನ ವಿರುದ್ಧ ದೂರು ದಾಖಲಾಗಿದೆ. ಈ ಹಾಡು ಕಮಲ್ ಹಾಸನ್ ಅವರ ಮುಂಬರುವ ವಿಕ್ರಮ್‌ ಚಿತ್ರದ್ದಾಗಿದೆ.

ಸಂಚಲನವನ್ನು ಉಂಟುಮಾಡಿದ ಹಾಡಿನ ಕೆಲವು ಸಾಲುಗಳನ್ನು ತಮಿಳಿನಿಂದ ಅನುವಾದಿಸಲಾಗಿದೆ. ರೋಗಗಳು ಹೆಚ್ಚುತ್ತಿರುವ ಸಮಯದಲ್ಲಿ ಖಜಾನೆಯಲ್ಲಿ ಹಣ ಉಳಿದಿಲ್ಲ. ಕೇಂದ್ರ ಸರ್ಕಾರದ ತಪ್ಪುಗಳಿಂದಾಗಿ ಈಗ ಏನೂ ಉಳಿದಿಲ್ಲ. ಕೀ ಈಗ ಕಳ್ಳನ ಬಳಿ ಇದೆ ಎಂಬ ಸಾಹಿತ್ಯ ಹಾಡಿನಲ್ಲಿ ಸೇರಿಸಲಾಗಿದೆ.

ಸಾಮಾಜಿಕ ಕಾರ್ಯಕರ್ತ ಸೆಲ್ವಂ ಎಂಬ ದೂರುದಾರರ ಹೇಳಿಕೆ ಪ್ರಕಾರ, ಈ ಸಾಲುಗಳನ್ನು ಹಾಡಿನಿಂದ ತೆಗೆದುಹಾಕಬೇಕು ಮತ್ತು ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಹೇಳಿದ್ದಾರೆ.

ಈ ಹಾಡನ್ನು ಕಮಲ್ ಹಾಸನ್ ಬರೆದಿದ್ದು, ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ. ಸಾಮಾಜಿಕ ಕಾರ್ಯಕರ್ತ ಸೆಲ್ವಂ ಅವರು ಹಾಡಿನ ಮೇಲಿನ ಸಾಲುಗಳನ್ನು ತೆಗೆದುಹಾಕಬೇಕು ಎಂದು ಆಗ್ರಹಿಸಿದ್ದಾರೆ. ದೂರಿನ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ ವಿಕ್ರಮ್ ಸಿನಿಮಾ ಬಿಡುಗಡೆ ಮಾಡದಂತೆ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

ಸಂಗೀತ ಸಂಯೋಜಕ ಅನಿರುದ್ಧ ರವಿಚಂದರ್ ಇತ್ತೀಚೆಗೆ ಕಮಲ್ ಹಾಸನ್ ಅವರೊಂದಿಗಿನ ಫೋಟೋಗಳನ್ನು ಹಂಚಿಕೊಂಡಿದ್ದರು. ಈ ವೇಳೆ ಅವರು, ನಟ ಪಾತಾಳ ಪಾತಾಳ ಹಾಡನ್ನು ಬರೆದು, ಹಾಡಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಪಾತಾಳ ಪಾತಾಳ ಹಾಡನ್ನು ಮೇ 11 ರಂದು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಯಿತು.

— Kamal Haasan (@ikamalhaasan) May 11, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...